ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Monday 16 September 2013


ಹಾಸನದಲ್ಲಿ ವೇದಭಾರತೀ ಆರಂಭವಾಗಿ ಒಂದು ವರ್ಷದಲ್ಲಿ ಹಲವಾರು ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದೆ.ಹಾಸನದಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮದಲ್ಲೆಲ್ಲಾ ವೇದಾಧ್ಯಾಯಿಗಳು ಮುಂದಿರುತ್ತಾರೆಂಬ ಸಂತೋಷಕ್ಕಿಂತ ಬೇರೇನು ಬೇಕು? ನಿನ್ನೆ ಮಿತ್ರರಾದ ಪ್ರಕಾಶ್ ಎಸ್,ಯಾಜಿ ದೂರವಾಣಿಕರೆಮಾಡಿ ಪೊನ್ನಪೇಟೆಯ ಶ್ರೀ ರಾಮಕೃಷ್ಣಾಶ್ರಮದ ಮೂವರು ಯತಿಗಳು ಹಾಸನಕ್ಕೆ ಬರುವ ವಿಚಾರ ತಿಳಿಸಿದರು.ಇಂದು ಸಂಜೆ 6.00 ಗಂಟೆಗೆ ಅಗ್ನಿಹೋತ್ರ ನಡೆಯುವ ಸಂದರ್ಭಕ್ಕೆ ಮೂವರೂ ಯತಿಗಳು ಈಶಾವಾಸ್ಯಂ ಗೆ ಬಂದರು.ಒಂದು ಪುಟ್ಟ ಸಭೆ ನಡೆದು ಸ್ವಾಮಿ ಯುಕ್ತೇಶ್ವರಾನಂದರು ವಿವೇಕಾನಂದರ ಬಗ್ಗೆ ಸೊಗಸಾಗಿ ಮಾತನಾಡಿದರು.ಎಲ್ಲಾ ವೇದಾಧ್ಯಾಯಿಗಳೂ ಭಾವಪರವಶರಾದರು.ನವಂಬರ್ ನಲ್ಲಿ ನಡೆಯಲಿರುವ ವಿವೇಕಾನಂದ ರಥಯಾತ್ರೆಯನ್ನು ಯಶಸ್ವಿಯಾಗಿಸಲು ಎಲ್ಲರೂ ಸಂಕಲ್ಪ ಮಾಡುವುದರೊಂದಿಗೆ ಸಭೆಯು ಮುಕ್ತಾಯವಾಯ್ತು

No comments:

Post a Comment