ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday 12 February 2013

ವಿವೇಕಾನಂದರ ವಿಚಾರಗಳನ್ನು ಹೃದಯದಲ್ಲಿ ತುಂಬಿಕೊಳ್ಳೋಣ




ಯುವಕರು ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಹೃದಯದಲ್ಲಿ ತುಂಬಿಕೊಂಡು ಸಮಾಜಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಮಾತ್ರ ಯುವ ದಿವಸವನ್ನು ಸ್ವಾಮೀಜಿಯವರ ಹೆಸರಲ್ಲಿ ಆಚರಿಸಿದ್ದು ಸಾರ್ಥಕವಾದೀತು, ಎಂದು  ಸ್ವಾಮಿ ವಿವೇಕಾನಂದ150ನೇ ಜನ್ಮ ವರ್ಷಾಚರಣೆಯ  ಹಾಸನ ಜಿಲ್ಲಾ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಕರೆ ನೀಡಿದರು.ಅವರು ಹಾಸನದ  ಶ್ರೀಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಹಾಸನ ತಾಲ್ಲೂಕು  ಚನ್ನಂಗಿಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.    ಚಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ    ಮತ್ತು ಅದರ ಪರಿಣಾಮ ವಾಗಿ ಅಮೆರಿಕೆಯ ಜನರಲ್ಲಿ ಉಂಟಾದ ವೈಚಾರಿಕ ಪರಿವರ್ತನೆಯ ಬಗ್ಗೆ ಶ್ರೀಯುತರು   ಎಳೆ ಎಳೆಯಾಗಿ ವಿವರಿಸದರು. ವಿದ್ಯಾರ್ಥಿಗಳು ಶಿಬಿರದಲ್ಲಿ ಇರುವ ನಾಲ್ಕು ದಿನಗಳಲ್ಲಿ ಮುಂದೆಯೂ ಗ್ರಾಮಸ್ಥರ ನೆನಪಿನಲ್ಲಿರುವಂತಹ ಸಾಮಾಜಿಕ ಕಾರ್ಯವನ್ನು ಮಾಡಬೇಕೆಂದು ಕರೆ ಕೊಟ್ಟರು. ಶ್ರೀಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಗುರುರಾಜ ಜಹಾಗಿರ್ದಾರ್ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದರು.ಶಿಬಿರ ಸಂಯೋಜಕರಾದ ಪ್ರೊ. ಪಾಂಡುರಂಗ ಮತ್ತು ಊರಿನ ಪ್ರಮುಖರು ವೇದಿಕೆಯಲ್ಲಿದ್ದರು.

Sunday 3 February 2013

ಮಂಗಳೂರಿನಲ್ಲಿ ಐತಿಹಾಸಿಕ ಯುವ ದರ್ಶನ



ಅಬ್ಭಾ! ಒಂದು ಕರಪತ್ರವಿಲ್ಲ, ಒಂದು ಫ್ಲೆಕ್ಸ್ ಇಲ್ಲ, ಒಂದು ಬಂಟಿಂಗ್ಸ್ ಇಲ್ಲ,.....ಆದರೆ ಮನೆ ಮನೆಗೆ ಹೋಗಿ ಯುವಕರನ್ನು ಮಾತನಾಡಿಸಿ ಮಹಾ ಸಾಂಘಿಕ್ ಗೆ ಹೊರಡಿಸುವ ಕೆಲಸ ಮಾತ್ರ ಯಜ್ಞ ದಂತೆ ನಡೆದಿತ್ತು. RSS ಕಾರ್ಯಕರ್ತರು ಮನೆ ಮಠ ತೊರೆದರು,ಅವರ ಕಣ್ಮುಂದೆ ಒಂದೇ ವಿಚಾರ ಫೆಬ್ರವರಿ 3ಕ್ಕೆ ಒಂದು ಲಕ್ಷ ಯುವಕರನ್ನು ಸೇರಿಸಬೇಕು.ಎಲ್ಲರೂ ಮಂಗಳೂರು ಮತ್ತು ಮಡಕೇರಿ ಜಿಲ್ಲೆಯವರು ಮಾತ್ರ. ನೋಡುವುದಕ್ಕೆ ಹೋಗಿದ್ದ ನಮ್ಮಂತವರೂ ಸಾವಿರಾರು ಮಂದಿ ಇದ್ದೆವು. ಮಹಾ ಸಾಂಘಿಕ್ ನಡೆಯುವ ಸ್ಥಳಕ್ಕೆ ಹೋಗುವ 15 ಕಿಲೋ ಮೀಟರ್ ರಸ್ತೆ ತುಂಬ ಹೊರಟಿದ್ದ ಸ್ವಯಂಸೇವಕರ ಜನಸಾಗರ ಮತ್ತು ಸಾವಿರಾರು ವಾಹನಗಳನ್ನು ನೋಡಿ ನಮ್ಮ ಕಾರ್ ಚಾಲಕ ಸುನಿಲ್ ಹೇಳಿದ "ನಾವು ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೋಗಿರುತ್ತೆ!! RSS ಕಾರ್ಯಾಲಯ ಸಂಘನಿಕೇತನದಿಂದ ಸುಮಾರು 15 ಕಿಲೋ ಮೀಟರ್ ದೂರದ ಕಾರ್ಯಕ್ರಮದ ಮೈದಾನ ಕ್ಕೆ ಮೂರು ಗಂಟೆ ಮುಂಚೆ ಹೊರಟಿದ್ದ ನಮ್ಮ ಸ್ಥಿತಿ ಇದು.ಹೌದು ನಾವೇನೋ ಸರಿಯಾಗಿ ತಲುಪಿದೆವು. ಆದರೆ ಮಡಕೇರಿಯ ಸ್ವಯಂ ಸೇವಕರು ಮೈದಾನ ತಲುಪುವಾಗ ಸಮಾರಂಭ ಮುಗಿದಿತ್ತು. ಅವರೂ ಕೂಡ ಸಮಯಕ್ಕೆ ಸರಿಯಾಗಿಯೇ ಹೊರಟಿದ್ದರು. ಆದರೂ ಜನ ಸಾಗರದ ಮಧ್ಯೆ ಗಂಟೆಗೆ ಎರಡು ಕಿಲೋ ಮೀಟರ್ ದೂರ ಕಾರ್ ಸಾಗಲು ಕಷ್ಟವಾಗುತ್ತಿತ್ತು. ನಾನಂತೂ ಕಾರ್ ನಿಂದ ಇಳಿದು ಜನಸಾಗರದ ಮಧ್ಯೆ ನಡೆದೇ ಕಾರ್ಯಕ್ರಮ ಸ್ಥಳ ಸೇರಿದೆ. ಅಲ್ಲಿನ ಕಾರ್ಯಕರ್ತರ ಪರಿಶ್ರಮ ಕೇಳಿದರೆ ಮೈ ಝುಮ್ ಎನ್ನುತ್ತೆ. ಒಬ್ಬ ಕಾರ್ಯಕರ್ತನಂತೂ ಮನೆ ಬಿಟ್ಟು 84 ದಿನಗಳಾಗಿದೆಯಂತೆ. ನಿನ್ನೆ ರಾತ್ರಿಯೂ ಹೋಗಿರಲಾರ. ಇವತ್ತು ಹೋಗಬಹುದೇನೋ!!




ಇದು ಎಲ್ಲರಿಗೂ ತಕ್ಕ ಉತ್ತರವೇ ಹೌದು.ಸರಸಂಘಚಾಲಕರೇ ಹೇಳಿದಂತೆ RSS ಗೆ ಶಕ್ತಿ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಇಲ್ಲ.ಆದರೂ ಬೆಳೆಯುತ್ತಿರುವ ಸಂಘದ ಶಕ್ತಿ ಗೋಚರವಾಗದೆ ವಿಧಿ ಇಲ್ಲ.
ಕಂಗ್ರೆಸ್ ನವರ ಕಾಲ್ನಡಿಗೆಯಾಗಲೀ  BJP ಸೇರಿದಂತೆ  ಯಾವುದೇ ರಾಜಕೀಯ ಪಕ್ಷಗಳ ಕಾರ್ಯ ವೈಖರಿಗೂ ಸಂಘದ ಕಾರ್ಯ ಪದ್ದತಿಗೂ ಅಜಗಜಾಂತರ.




ಸಂಘದ ಕಾರ್ಯಕರ್ತನ ಹೃದಯಲ್ಲಿ ಒಂದೇ ವಿಚಾರ-ತಾಯಿ ಭಾರತಿಯ ಗೌರವ ಉಳಿಸಲು ನನ್ನ ಜೀವವನ್ನು ಒತ್ತೆ ಇಟ್ಟಾದರೂ ಹಗಲಿರಳು ಶ್ರಮಿಸಬೇಕು. ಅಷ್ಟೆ...ಅಷ್ಟೆ...ಅಷ್ಟೆ... ಬೇರೇನೂ ಚಿಂತೆ ಇಲ್ಲ. "ಸದೃಢ ಭಾರತವನ್ನು ಕಟ್ಟಲು ನಾವು ಮೀಸಲು"..ಇಷ್ಟೇ ಸ್ವಯಂಸೇವಕರ ವಿಚಾರ. ಅದರಂತೆ ಅವರ ಎಲ್ಲಾ ಕಾರ್ಯಶೈಲಿ. ವಿವೇಕಾನಂದರು ಬಯಸಿದ್ದು ಇಂತಹ ನೂರು ಜನ ಯುವಕರನ್ನು  RSS ಆದರೋ ಅಂತಹ  ಲಕ್ಷ್ಜ-ಲಕ್ಷ ಯುವಕರನ್ನು ಬೆಳೆಸುತ್ತಿದೆ. ದುಷ್ಟ ಶಕ್ತಿಗಳ ಎದೆ ನಡುಕ ಉಂಟಾಗುವಂತೆ ಬೆಳೆಯುತ್ತಲೇ ಇದೆ.



   


Some interesting things about the historic Mangaluru RSS Sanghik on Sunday.

a) 1152 villages of Dakshina Kannada, Udupi and Kodagu districts sent their youths in gaNa vesha.
b) Government police and spy agencies reported that more than 1,20,000 youth were IN gaNa vesha in the 65 acre freshly prepared ground. (Source: Kannada Prabha)
c) Traffic jams were happening even as of 1.30 PM, on a Sunday, for an afternoon event.
d) Per Bhagawat ji, this was NOT a show of strength. This was a part of Swami Vivekananda's 150th birth anniversary on the Saptami day.
e) Former CM of Karnataka Sadananda Gowda participated.
f) Anwar Manuppady, Karnataka minorities development agency's president and Franklin Montero of BJP minority morcha's VP also participated.
g) Not only Karnataka's ministers, MLAs and MLCs, even Goa's speaker Rajendra Aralikar participated.
h) This Sanghik shows how committed RSS youth are for the nation. Within 30 days, they turned 65 acres of private land of 3 owners, into a massive ground, mobilized lakhs of people and paid a fine tribute to Swami Vivekananda!

I am more than impressed!!!
- Kiran