ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday 11 December 2012

ವಿವೇಕಾನಂದ-150 ಏನು? ಎಂತು?



ಯುವ ಭಾರತ:
“ಆಧುನಿಕ ಪೀಳಿಗೆಯಲ್ಲಿ, ಯುವ ಪೀಳಿಗೆಯಲ್ಲಿ ನನಗೆ ನಂಬಿಕೆಯಿದೆ. ಅವರಿಂದಲೇ ನನಗೆ ಬೇಕಾದ ಕಾರ್ಯಕರ್ತರು ಹೊರಹೊಮ್ಮುತ್ತಾರೆ. ಸಿಂಹದಂತೆ ಅವರು ಸಮಸ್ಯೆಯನ್ನು ನಿವಾರಿಸುತ್ತಾರೆ”. ಸ್ವಾಮಿ ವಿವೇಕಾನಂದರ ನಿರ್ಧಾರ ಹೀಗಿತ್ತು. ಭಾರತದ ಜನಸಂಖ್ಯೆಯ ಶೇಕಡಾ 55 ಜನರು ಯುವಕರು, ಹಿಂದಿನಿಂದಲೂ ಭಾರತವು ಯುವಕರ ದೇಶವಾಗಿದೆ.
ಯುವ ಶಕ್ತಿಯ ಆಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು 18-40 ವರ್ಷ ವಯೋಮಾನದ ವಿದ್ಯಾರ್ಥಿಗಳಲ್ಲದ ಯುವಕರು ಸ್ವಾಮಿ ವಿವೇಕಾನಂದ ಯುವ ಮಂಡಲಿ, ಎಚ್ಚೆತ್ತ ಯುವಕರ ವೇದಿಕೆ, ವಿವೇಕಾನಂದ ಕ್ಲಬ್‌ಗಳ ಮೂಲಕ ಸಕ್ರಿಯರಾಗಲು ಉತ್ತೇಜಿಸಲಾಗುತ್ತದೆ. ಈ ಸಂಘಟನೆಗಳು ಸ್ಥಾನೀಯ ಅವಶ್ಯಕತೆಗಳು ಮತ್ತು ಪ್ರಕೃತಿಗೆ ಅನುಗುಣವಾಗಿ ಕಾರ್ಯವನ್ನು ನಡೆಸುತ್ತವೆ. ಶಕ್ತಿ ಹಾಗೂ ಸುರಕ್ಷೆ, ಸ್ವಾಧ್ಯಾಯ ಮತ್ತು ಸೇವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತವೆ.
ಶಕ್ತಿ: ಸಾಮೂಹಿಕ ಸೂರ್ಯನಮಸ್ಕಾರ” ಕಾರ್ಯಕ್ರಮಗಳನ್ನು ದೇಶದ ಪ್ರತಿಯೊಂದು ನಗರ ಮತ್ತು ಪಟ್ಟಣಗಳಲ್ಲಿ ರಥ ಸಪ್ತಮಿಯಂದು (ಫಬ್ರವರಿ 17, 2012) ನಡೆಸಲಾಗುತ್ತದೆ.
ಸ್ವಾಧ್ಯಾಯ: 2013ರಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಸೇವೆ: ಯುವಕರು ಸೇವಾ ಕಾರ್ಯಗಳಲ್ಲಿ ತೊಡಗುವಂತೆ ಮಾಡಲು “ವಿವೇಕಾನಂದ ಸೇವಾ ಫೆಲೋಶಿಪ್” ಪ್ರಾರಂಭಿಸಕಾಗುತ್ತದೆ.
----------------------------------------------------------------------------
ಸಂವರ್ಧಿನಿ:
“ಶಕ್ತಿಯಿಲ್ಲದೆ ಪುನರುತ್ಥಾನ ಸಾಧ್ಯವಿಲ್ಲ. ನಮ್ಮ ದೇಶವು ಮಿಕ್ಕೆಲ್ಲಾ ದೇಶಗಳಿಗಿಂತ ದುರ್ಬಲವಾಗಲು ಹಾಗೂ ಹಿಂದುಳಿಯಲು ಕಾರಣವೇನು? – ಏಕೆಂದರೆ, ಶಕ್ತಿಯನ್ನು ಅಲ್ಲಿ ಅಪಮಾನಿಸಲಾಗುತ್ತದೆ. ಶಕ್ತಿಯ ಅನುಗ್ರಹವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.
ನಮ್ಮ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸುವಂತಾಗಲು ಸಹಭಾಗಿತ್ವ, ಸೇವಾ, ವಿಕಾಸ, ಸಂಸ್ಕೃತಿ ಮತ್ತು ಸಮರಸತೆ ಹೆಸರುಗಳಲ್ಲಿ ಕಾರ್ಯಕ್ರಮಗಳು ನಡೆಸಲಾಗುತ್ತದೆ.
1. ದಂಪತಿ ಸಮ್ಮೇಳನ – ಸಾಮಾಜಿಕ ಪುನರುತ್ಥಾನದ ಕಾರ್ಯಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಮಹತ್ವದ ಕುರಿತಾಗಿ ಅರಿವು ಮೂಡಿಸಲು ಮತ್ತು ಅಂತಹ ಸಮಯದಲ್ಲಿ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯಕವಾಗುವಂತೆ ಮಾಡಲು, ಅರ್ಧ ದಿನ ಅಥವಾ ಒಂದು ದಿನದ ದಂಪತಿಗಳ ಸಮಾವೇಶ ನಡೆಸಲಾಗುವುದು.
2. ಶಕ್ತಿ ಸಮ್ಮೇಳನ – ಮಹಿಳೆಯು ತನ್ನ ಸಾಮರ್ಥ್ಯವನ್ನು ಮನಗಾಣಲು ಮತ್ತು ರಾಷ್ಟ್ರೀಯ ಪುನರುತ್ಥಾನದ ಕಾರ್ಯದಲ್ಲಿ ತನ್ನ ಪಾತ್ರವನ್ನು ತಿಳಿಯಲು, ಶಕ್ತಿ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇವುಗಳಲ್ಲಿ,
ಅ) ಪ್ರದರ್ಶನ: “ಭಾರತೀಯ ಮಹಿಳೆ – ವಿವಿಧ ಕಾಲಗಳಲ್ಲಿ”, “ಭಾರತದ ವಿವಿಧ ಮಹಿಳಾಮಣಿಗಳು” ಮತ್ತು “ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು”.
ಆ) ಮಹಿಳಾ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಭಾಷಣಗಳು ಮತ್ತು ಪ್ರಶಿಕ್ಷಣಗಳು.
-------------------------------------------------------------------------
ಪ್ರಬುದ್ಧ ಭಾರತ:
ಸ್ವಾಮಿ ವಿವೇಕಾನಂದರು, “ಯಾರು ಇತರರಿಗಾಗಿ ಬದುಕುತ್ತಾರೋ, ಅವರೇ ನಿಜವಾಗಿ ಬದುಕುವವರು. ಇತರರು ಬದುಕಿಯೂ ಸತ್ತಂತೆಯೇ” ಎಂದು ಹೇಳಿದ್ದಾರೆ.
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಗಣ್ಯರು ಮತ್ತು ಬುದ್ಧಿಜೀವಿಗಳಿಗೆ ಬಹಳ ದೊಡ್ಡ ಜವಾಬ್ದಾರಿಯಿದೆ. ಸಮಾಜದ ಎಲ್ಲಾ ರಂಗಗಳಲ್ಲಿರುವ ಇಂತಹ ಚಿಂತಕರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ತೊಡಗಿಸಲು ಈ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ.
1. ವಿಮರ್ಶ: ಪ್ರಮುಖ ವಿಷಯಗಳ ಕುರಿತಾಗಿ ಭಾಷಣಗಳು.
2. ಯೋಗ ಪ್ರತಿಮೆಗಳು (ಯೋಗದ ಆಧಾರದ ಮೇಲೆ ಶಿಕ್ಷಣ ಕೂಟಗಳು). ಹಿರಿಯ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ಅರೆಸೈನಿಕ ಮತ್ತು ರಕ್ಷಣಾಪಡೆಗಳಲ್ಲಿರುವವರು, ಶಾಲಾ ಆಡಳಿತದಲ್ಲಿರುವವರು, ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿರುವವರು, ಸರಕಾರೇತರ ಸಂಸ್ಥೆಗಳ ಪ್ರಮುಖರು ಮತ್ತು ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಪಂಚಾಯತ್ ಅಧ್ಯಕ್ಷರು, ಇತ್ಯಾದಿ ಜನಪ್ರತಿನಿಧಿಗಳಿಗೆ.
3. ಗೋಷ್ಠಿಗಳು – ಸ್ವಾಮಿ ವಿವೇಕಾನಂದರ ವಿಷಯದ ಕುರಿತಾಗಿ, ಚಾರಿತ್ರಿಕ ಮಹತ್ವದ, ನಾಗರೀಕತೆಗೆ ಸಂಬಂಧಿಸಿದಂತೆ ಮಹತ್ವದ ಹಾಗೂ ಸಾಂಸ್ಕೃತಿಕ ಮಹತ್ವದ ಸಂಗತಿಗಳು ಮತ್ತು ವರ್ತಮಾನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತವೆನಿಸುವಂತಹ ವಿಷಯಗಳನ್ನಿಟ್ಟುಕೊಂಡು, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗೋಷ್ಠಿಗಳು ಮತ್ತು ಸಮ್ಮೇಳನಗಳು.
4. ಭಾಗವಹಿಸುವಿಕೆ – ಸ್ವಾಮಿ ವಿವೇಕಾನಂದರ ವ್ಯಕ್ತಿ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ಮಾಣದ ಸಂದೇಶವನ್ನಿಟ್ಟುಕೊಂಡು ಬುದ್ಧಿಜೀವಿಗಳು ಲೇಖನಗಳನ್ನು ಬರೆಯುವಂತೆ ಮಾಡುವುದು ಮತ್ತು ಮಾತನಾಡುವಂತೆ ಮಾಡುವುದು.
--------------------------------------------------------------------------------------
ಗ್ರಾಮಾಯಣ:
“ಹೊಸ ಭಾರತವು ಏಳಲಿ……..ಅವಳು ಮೇಲೇಳಲಿ – ರೈತನ ಗುಡಿಸಲುಗಳಲ್ಲಿ ನೇಗಿಲುಗಳನ್ನು ಹಿಡಿದುಕೊಂಡು; ಬೆಸ್ತರ ಗುಡಿಸಲುಗಳಲ್ಲಿ,……ಕಿರಾಣಿ ಅಂಗಡಿಗಳಲ್ಲಿ ಅವಳು ಹೊರ ಹೊಮ್ಮಲಿ,  ಮನೆ ಯಲ್ಲಿನ ಒಲೆಗಳಿಂದ ಹೊಮ್ಮಲಿ. ಆಕೆ ತೋಪುಗಳಿಂದ ಹಾಗೂ ಕಾಡುಗಳಿಂದ, ಬೆಟ್ಟ ಹಾಗೂ ಪರ್ವತಗಳಿಂದ ಹೊರಹೊಮ್ಮಲಿ” ಈ ರೀತಿಯಾಗಿ ಕೊಲಂಬೋದಿಂದ ಅಲ್ಮೋರಾವರೆಗಿನ ಭಾಷಣಗಳಲ್ಲಿ ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ.
ಗ್ರಾಮಾಯಣದ ಉದ್ದೇಶ, ಸಮಾಜದಲ್ಲಿ ಗ್ರಾಮ ಜೀವನದ ಕುರಿತಾಗಿ ಹೆಮ್ಮೆಯನ್ನುಂಟು ಮಾಡುವುದು. ದೇಶದಲ್ಲಿರುವ 6 ಲಕ್ಷ ಗ್ರಾಮಗಳನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಲು, ಗ್ರಾಮ ಮಟ್ಟದ ಸಮಿತಿಗಳನ್ನು ಮಾಡಲಾಗುವುದು. ಸ್ಥಾನೀಯ ಪದ್ಧತಿ ಮತ್ತು ಸಂಪ್ರದಾಯಕ್ಕನುಗುಣವಾಗಿ ಅವರು ಕಾರ್ಯಕ್ರಮಗಳನ್ನು ಆಯೋಜಿಸುವರು. ಭಾರತ ಮಾತಾ ಪೂಜನ, ಕಥಾ ಕೀರ್ತನ, ಮೇಳ, “ಮೇರಾ ಗಾಂವ್ ಮೇರಾ ತೀರ್ಥ್”, ಇತ್ಯಾದಿಗಳು.
ನಗರವಾಸಿ ಯುವಕರು ಗ್ರಾಮಗಳಲ್ಲಿನ ಕಾರ್ಯಕ್ಕೆ ಸಮಯ ನೀಡುವಂತೆ ಪ್ರೇರೇಪಿಸಲು, ವಿವೇಕ ಗ್ರಾಮ್ ಅಥವಾ ಅಸ್ಪೃಷ್ಯತೆಯ ಆಚರಣೆಯಿಲ್ಲದ, ಮತಾಂತರ ನಡೆಯದ, ವ್ಯಸನಮುಕ್ತ, ಪೊಲೀಸರ ಹಾಗೂ ನ್ಯಾಯಾಲಯಗಳ ಮೇಲೆ ಅವಲಂಬಿತವಾಗಿರದ, ರಾಸಾಯನಿಕ ಗೊಬ್ಬರಗಳನ್ನುಪಯೋಗಿಸದ ಗ್ರಾಮಗಳ ನಿರ್ಮಾಣಕ್ಕಾಗಿ,  ದೀರ್ಘಕಾಲೀನ ಸೇವಾ ಪ್ರಕಲ್ಪಗಳಲ್ಲಿ ಅವರನ್ನು ತೊಡಗಿಸುವುದು. ನಗರಗಳಲ್ಲಿರುವ ಗ್ರಾಮದಂತಿರುವ ಪ್ರದೇಶಗಳನ್ನೂ ಸಹ ವಿವೇಕ ಬಸ್ತಿಯನ್ನಾಗಿ ಅಭಿವೃದ್ಧಿ ಮಾಡಲಾಗುವುದು.
---------------------------------------------------------------------------------
ಅಸ್ಮಿತಾ:
“ದೇಶದ ಭವಿಷ್ಯವು ದುರ್ಬಲರ   ಜನರ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಅವರನ್ನು ನೀವು ಎಬ್ಬಿಸಬಲ್ಲಿರಾ? ಅವರ ಆಂತರಿಕ ಆಧ್ಯಾತ್ಮಿಕ ಪ್ರಕೃತಿಯನ್ನು ಕಳೆದುಹಾಕದೆ, ಅವರು ಕಳೆದುಕೊಂಡಿರುವ ತಮ್ಮತನವನ್ನು ಅವರಿಗೆ ನೀವು ನೀಡಬಲ್ಲಿರೇನು?” ಈ ರೀತಿಯಾಗಿ ವಿವೇಕಾನಂದರು ಪಂಥಾಹ್ವಾನ ನೀಡಿದರು.
ವನವಾಸಿಗಳಿಗೆ, ಅವರ ಸಾಂಸ್ಕೃತಿಕ ಹಾಗೇ ಮತೀಯ ಸಂಪ್ರದಾಯಗಳೇ ಅವರ ಗುರುತು ಮತ್ತು ಅದೇ ಆ ಸಮಾಜವನ್ನು ಒಂದಾಗಿಡುತ್ತದೆ ಹಾಗೂ ಪ್ರಕೃತಿಗೆ ಅನುಗುಣವಾಗಿರುವಂತೆ ಇಡುತ್ತದೆ. ಸಂಪ್ರದಾಯಗಳು ನಷ್ಟವಾದರೆ ಜನಜಾತಿಗಳು ತಮ್ಮ ಗುರುತು, ನೈತಿಕ ಮೌಲ್ಯಗಳು ಮತ್ತು ಶಾಂತಿಯನ್ನು ಕಳೆದುಕೊಂಡು ಬಿಡುತ್ತವೆ. ಸಮಯವು ಸರಿದಂತೆ ಮುನ್ನಡೆಯಲು, ಸಾಂಸ್ಕೃತಿಕ ಸಂಪ್ರದಾಯಗಳ ಮೂಲಕ ಅಭಿವೃದ್ಧಿ ಹೊಂದಲು ಅವರಿಗೆ ಆತ್ಮವಿಶ್ವಾಸ ಬೇಕು. ಇದಕ್ಕಾಗಿ ವನವಾಸಿ ಕ್ಷೇತ್ರಗಳಲ್ಲಿ, ಅವರಿಗೆ ತಮ್ಮ ಸಂಪ್ರದಾಯಗಳು ಹಾಗೂ ಸಂಸ್ಕೃತಿಗಳಲ್ಲಿ ಶ್ರದ್ಧೆ ಹೆಚ್ಚೆಚ್ಚು ಗಟ್ಟಿಯಾಗುವಂತೆ ಮಾಡಲು “ಸಂಸ್ಕೃತಿಯ ಮೂಲಕ ಅಭಿವೃದ್ಧಿ” ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
1. ಜನಜಾತಿ ವೇದಿಕೆಗಳ ಸಮ್ಮೇಳನಗಳು
2. ಗ್ರಾಮೀಣ ಮುಖ್ಯಸ್ಥರ ಸಭೆಗಳು
3. ದೇಶೀಯ ನಂಬಿಕೆಗಳನ್ನು ಗಟ್ಟಿಮಾಡಲು ಜನಜಾತಿ ಉತ್ಸವ ಪೂರ್ಣ ಬೆಂಬಲ.
4. ಸಂಪ್ರದಾಯ, ವೈಜ್ಞಾನಿಕ ಆಧಾರ ಮತ್ತು ಮುಂದುವರಿಕೆಯ ಕುರಿತಾಗಿ ವಿಚಾರ ಸಂಕಿರಣಗಳು.
5. ಸ್ವಾಮೀಜಿಯವರ ಕುರಿತಾಗಿ ಮತ್ತು ಅವರ ಸಂದೇಶವನ್ನು ಸಾರುವ ವಿಡಿಯೋಗಳು.

No comments:

Post a Comment