ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Wednesday 8 January 2014

ಸ್ವಾಮಿ ವಿವೇಕಾನಂದ ಜಯಂತಿ

ವೇದಭಾರತೀ, ಹಾಸನ
ಸ್ವಾಮಿ ವಿವೇಕಾನಂದ ಜಯಂತಿ

ಸ್ಥಳ:ಈಶಾವಾಸ್ಯಮ್, ಶಕ್ತಿಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ,ಹಾಸನ
ದಿನಾಂಕ: ೧೨.೧.೨೦೧೪ ಭಾನುವಾರ ಸಂಜೆ ೫.೩೦ ರಿಂದ
ಅಗ್ನಿಹೋತ್ರ 
ವಿವೇಕಾನಂದ ಚಿಂತನ ಗೋಷ್ಠಿ
ಮುಖ್ಯ ಉಪನ್ಯಾಸ

ಪೂಜ್ಯ ಶ್ರೀಯುಕ್ತೇಶಾನಂದಜಿ ಮಹಾರಾಜ್
ಶ್ರೀ ರಾಮಕೃಷ್ನ ಶಾರದಾಶ್ರಮ,ಪೊನ್ನಮ್ ಪೇಟೆ

ಅಧ್ಯಕ್ಷತೆ:
ಶ್ರೀ ಕವಿ ನಾಗರಾಜ್,
ಅಧ್ಯಕ್ಷರು, ವೇದಭಾರತೀ,ಹಾಸನ

ಮುಖ್ಯ ಅತಿಥಿಗಳು:
ಶ್ರೀ ಸಿ.ಎಸ್.ಕೃಷ್ಣಸ್ವಾಮಿ
ಪ್ರಾಂಶುಪಾಲರು, ಶ್ರೀರಾಮಕೃಷ್ಣವಿದ್ಯಾಲಯ,ಹಾಸನ
ಶ್ರೀ ಕೆ.ಪಿ.ಎಸ್.ಪ್ರಮೋದ್
ಪ್ರಧಾನ ಸಂಪಾದಕರು, ಅಮೋಘ್ ವಾಹಿನಿ, ಹಾಸನ, ಮತ್ತು
ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಡಾ|| ಜನಾರ್ಧನ್
ಅಧ್ಯಕ್ಷರು,ಕನ್ನಡಸಾಹಿತ್ಯ ಪರಿಷತ್ತು,.ಹಾಸನ ಮತ್ತು
ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಶ್ರೀ ಪಾರಸ್ ಮಲ್
ನಗರ ಸಂಘಚಾಲಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಸನ
ಡಾ|| ಗುರುರಾಜ ಹೆಬ್ಬಾರ್
ಸಮಾಜ ಸೇವಕರು, ಶ್ರೀರಾಮಕೃಷ್ಣ ನರ್ಸಿಂಗ್ ಹೋಮ್, ಹಾಸನ

ಸರ್ವರಿಗೂ ಆದರದ ಸ್ವಾಗತ
ಚಿನ್ನಪ್ಪ
ಕಾರ್ಯದರ್ಶಿ,ವೇದಭಾರತೀ, ಹಾಸನ
------------------------------------------------------------------------------------------------------------
ಪ್ರತಿದಿನ  ಸಂಜೆ ೬.೦೦ ರಿಂದ ೭.೦೦ ರ ವರಗೆ ಈಶಾವಾಸ್ಯಮ್ ನಲ್ಲಿ  ನಡೆಯುತ್ತಿರುವ ಎಲ್ಲರಿಗಾಗಿ ವೇದ  ಉಚಿತ ವೇದಪಾಠ, ಅಗ್ನಿಹೋತ್ರ ಮತ್ತು ಸಂಸ್ಕೃತ ಕಲಿಕಾ ತರಗತಿಗಳಿಗೆ ಸೇರಲು ಮುಕ್ತ ಅವಕಾಶವಿದೆ
Visit:  vedasudhe.com      Mail: vedasudhe@gmail.com
ಮಾಹಿತಿಗಾಗಿ  ಸಂಪರ್ಕಿಸಿ:    9663572406

Thursday 17 October 2013

ಶ್ರೀ ವಾಜಪೇಯಿಯವರ ಒಂದು ಕವನ

http://www.mediafire.com/download/09o6h9817h468yf/vajapeyi_0.mp3

ಶ್ರೀ ವಾಜಪೇಯಿಯವರ ಒಂದು ಕವನ ಇಲ್ಲಿದೆ. ಅವರ ಆರೋಗ್ಯ ಸುಧಾರಿಸಿಲ್ಲ. ಅವರ ಅಂದಿನ ಮತ್ತು ಇಂದಿನ ಚಿತ್ರ ನೋಡಿದಾಗ ಸಂಕಟವಾಗುತ್ತೆ. ವಾಜಪೇಯಿಯವರ ಪ್ರತಿಯೊಂದು ಮಾತು ಅವರ  ಹೃದಯದಿಂದ ಬಂದಿದ್ದು, ಹಾಗಾಗಿ  ನಮ್ಮನ್ನು ಕಟ್ಟಿ ಹಾಕುತ್ತವೆ. ಅವರ ಕವನವನ್ನು ಅವರ ಕಂಠಸಿರಿಯಲ್ಲೇ ಕೇಳಿ. ಹಿಂದಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರ ಕನ್ನಡ ಅರ್ಥವನ್ನು ಯಾರಾದರೂ ಮಹನೀಯರು ನನಗೆ ಮೇಲ್ ಮಾಡುವಿರಾದರೆ  ವಿನಮ್ರವಾಗಿ ಸ್ವೀಕರಿಸಿ ಹಲವರಿಗೆ ತಲುಪಿಸುವೆನು.ಯಾರಾದರೂ ಸಹಾಯ ಮಾಡ್ತೀರಾ? ನನ್ನ ಮೇಲ್ ವಿಳಾಸ vedasudhe@gmail.com

ವಾಜಪೇಯೀ ಕಂಠದಿಂದ ಕೇಳಿ....

Sunday 29 September 2013

ಶಿವಮೊಗ್ಗದಲ್ಲಿ ಪ್ರಬುದ್ಧರ ವಿಚಾರಗೋಷ್ಠಿ

ಶಿವಮೊಗ್ಗ Sept 29: ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆ ಅಂಗವಾಗಿ ಸೆ.೨೯ರ ಭಾನುವಾರ ಬಿ.ಹೆಚ್. ರಸ್ತೆಯ ಅಶೋಕ ಸಾಮ್ರಾಟ್‌ನಲ್ಲಿ ಪ್ರಬುದ್ಧರ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು.
Intellectual Meet held at Shimoga Sept 29, 2013
Intellectual Meet held at Shimoga Sept 29, 2013
ಕುವೆಂಪು ವಿವಿಯ ದೂರಶಿಕ್ಷಣ ನಿರ್ದೇಶಕ ಡಾ. ವೆಂಕmಶ್ವರಲು ಉದ್ಘಾಟಿಸಿದರು. ಶಿವಮೊಗ್ಗದ ಖ್ಯಾತ ಉದ್ಯಮಿ ಹಾಗೂ ಸ್ವಾಮಿ ವಿವೇಕಾನಂದ ೧೫೦ನೇ ಜನ್ಮ ವರ್ಷಾಚರಣೆ ಸಮಿತಿಯ ಪ್ರಾಂತೀಯ ಸದಸ್ಯ ಹೆಚ್.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ರಾ.ಸ್ವ. ಸಂಘದ ಹಿರಿಯ ಪ್ರಚಾರಕರಾದ  ನ. ಕೃಷ್ಣಪ್ಪ ವೇದಿಕೆಯಲ್ಲಿದ್ದರು.
ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಧಾರವಾಡ ಆಕಾಶವಾಣಿಯ ಕಾರ್ಯಕ್ರಮಾಧಿಕಾರಿ ದಿವಾಕರ ಹೆಗಡೆ, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯ ಹಾಗೂ ಉಪನ್ಯಾಸಕ ಡಾ. ಜಯಕೃಷ್ಣ ನಾಯಕ್ ಅವರುಗಳು ವಿಚಾರ ಮಂಡನೆ ಮಾಡಿದರು. ನ. ಕೃಷ್ಣಪ್ಪನವರು ಸಮಾರೋಪ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಈ ವಿಚಾರಗೋಷ್ಠಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು.

Thursday 26 September 2013

ವಿವೇಕಾನಂದ-ಯುವಸಮಾವೇಶ

ಕೆಳಗಿನ ಕೊಂಡಿಯಲ್ಲಿ ಭಾಷಣವನ್ನು ಕೇಳಲೂ ಬಹುದು. ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು. http://www.mediafire.com/download/llrjuje2xtekc8k/Vivekaananda_speech_at_CRP(2).mp3




Monday 16 September 2013


ಹಾಸನದಲ್ಲಿ ವೇದಭಾರತೀ ಆರಂಭವಾಗಿ ಒಂದು ವರ್ಷದಲ್ಲಿ ಹಲವಾರು ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದೆ.ಹಾಸನದಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮದಲ್ಲೆಲ್ಲಾ ವೇದಾಧ್ಯಾಯಿಗಳು ಮುಂದಿರುತ್ತಾರೆಂಬ ಸಂತೋಷಕ್ಕಿಂತ ಬೇರೇನು ಬೇಕು? ನಿನ್ನೆ ಮಿತ್ರರಾದ ಪ್ರಕಾಶ್ ಎಸ್,ಯಾಜಿ ದೂರವಾಣಿಕರೆಮಾಡಿ ಪೊನ್ನಪೇಟೆಯ ಶ್ರೀ ರಾಮಕೃಷ್ಣಾಶ್ರಮದ ಮೂವರು ಯತಿಗಳು ಹಾಸನಕ್ಕೆ ಬರುವ ವಿಚಾರ ತಿಳಿಸಿದರು.ಇಂದು ಸಂಜೆ 6.00 ಗಂಟೆಗೆ ಅಗ್ನಿಹೋತ್ರ ನಡೆಯುವ ಸಂದರ್ಭಕ್ಕೆ ಮೂವರೂ ಯತಿಗಳು ಈಶಾವಾಸ್ಯಂ ಗೆ ಬಂದರು.ಒಂದು ಪುಟ್ಟ ಸಭೆ ನಡೆದು ಸ್ವಾಮಿ ಯುಕ್ತೇಶ್ವರಾನಂದರು ವಿವೇಕಾನಂದರ ಬಗ್ಗೆ ಸೊಗಸಾಗಿ ಮಾತನಾಡಿದರು.ಎಲ್ಲಾ ವೇದಾಧ್ಯಾಯಿಗಳೂ ಭಾವಪರವಶರಾದರು.ನವಂಬರ್ ನಲ್ಲಿ ನಡೆಯಲಿರುವ ವಿವೇಕಾನಂದ ರಥಯಾತ್ರೆಯನ್ನು ಯಶಸ್ವಿಯಾಗಿಸಲು ಎಲ್ಲರೂ ಸಂಕಲ್ಪ ಮಾಡುವುದರೊಂದಿಗೆ ಸಭೆಯು ಮುಕ್ತಾಯವಾಯ್ತು