ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday 25 December 2012

ಹಾಸನದಲ್ಲಿ ಸಂಕಲ್ಪ ದಿನ


ಸ್ವಾಮಿ  ವಿವೇಕಾನಂದ

ಹಾಸನದ ಶುಭೋದಯ ಕಲ್ಯಾಣಮಂಟಪದಲ್ಲಿ  ದಿನಾಂಕ 25.12.2012 ಮಂಗಳವಾರ ಸಂಜೆ 6.30 ರಿಂದ ಸ್ವಾಮಿವಿವೇಕಾನಂದರ 150ನೇ ಜನ್ಮ ವರ್ಷ ಅಭಿಯಾನದ ಪ್ರಯುಕ್ತ ಸಂಕಲ್ಪದಿನವನ್ನು ಆಚರಿಸಲಾಯ್ತು. ಶ್ರೀ ಹರಿಹರಪುರಶ್ರೀಧರ್ ಅವರು ಇಂದಿನ ದಿನದ ಮಹತ್ವವನ್ನು ತಿಳಿಸುತ್ತಾ ಇಂದಿಗೆ ಸರಿಯಾಗಿ 120 ವರ್ಷಗಳ ಹಿಂದೆ      ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯೆ ಬಂಡೆಯಮೇಲೆ ಕುಳಿತು ಧ್ಯಾನ ಮಾಡಿ  ನಮ್ಮ ದೇಶದ ಕಟ್ಟಕಡೆಯ  ಬಡವನ  ಕಣ್ಣೀರು ನಿಲ್ಲುವವರೆಗೂ ತಾವು ವಿರಮಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದನ್ನು ಪ್ರಸ್ತಾಪಿಸಿ ನಾವೂ ಕೂಡ ಇಂದು ಅದೇ ಸಂಕಲ್ಪವನ್ನು ಮಾಡಿ ವಿವೇಕಾನಂದರ ವಿಚಾರವನ್ನು ದೇಶದೆಲ್ಲೆಡೆ ಪ್ರಚಾರಮಾಡುತ್ತಾ ವಿವೇಕಾನಂದರ  150ನೇ ಜನ್ಮ ವರ್ಷ ಅಭಿಯಾನದ  ಮಾಹಿತಿ ತಿಳಿಸಿ ಸಂಕಲ್ಪ ಹೇಗೆ ಮಾಡ ಬೇಕೆಂಬುದರ ಬಗ್ಗೆ ತಿಳಿಸಿದರು. ಶ್ರೀ ಹೊ.ಸು.ರಮೇಶ್  ಅವರು ಅಭಿಯಾನ ಗೀತೆಯನ್ನು ಹೇಳಿಕೊಟ್ಟರು. ಶ್ರೀ ಅನಂತನಾರಾಯಣ ಅವರು ಸಂಕಲ್ಪದ ನಂತರ ಶಾಂತಿಮಂತ್ರವನ್ನು ಆರಂಭಿಸಿದರೆ ಎಲ್ಲರೂ ಸಾಮೂಹಿಕವಾಗಿ ಶಾಂತಿಮಂತ್ರವನ್ನು ಹೇಳುವುದರ ಜೊತೆಗೆ ಕಾರ್ಯಕ್ರಮವು ಮುಕ್ತಾಯವಾಯ್ತು.


Wednesday 19 December 2012

ಸಂಕಲ್ಪ ದಿನ ವಿಶೇಷ ಲೇಖನ

swami-vivekananda

   ವಿವೇಕಾನಂದರ ಹೆಸರು ಕಿವಿಗೆ ಬಿದ್ದರೆ ಸಾಕು ಜನರಿಗೆ ರೋಮಾಂಚನ ವಾಗುತ್ತೆ.ಏಕೆ? ಏಕೆಂದರೆ  ಸ್ವಾಮಿ ವಿವೇಕಾನಂದರು ನಮಗಾಗಿ ಕಣ್ಣೀರಿಟ್ಟಿದ್ದಾರೆ. ವಿವೇಕಾನಂದರ ಬಗ್ಗೆ ಜನಮಾನಸರಲ್ಲಿ ಯಾವ ಭಾವನೆ ಇದೇ? ಎಂಬುದನ್ನು ತಿಳಿಯುವ ಅವಕಾಶ ಒಂದು  ಈಗ್ಗೆ ಸರಿಯಾಗಿ ಐವತ್ತು ವರ್ಷಗಳ ಹಿಂದೆ 1963ರಲ್ಲಿ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಒದಗಿ ಬಂತು. ಆಗ ಕೆಲವಾರು  ಸಾಮಾಜಿಕ ಕಾರ್ಯಕರ್ತರುಗಳು RSS ಜೊತೆಗೂಡಿ  ಚಿಂತನೆ ನಡೆಸಿ ವಿವೇಕಾನಂದರ ಸ್ಮಾರಕ ಒಂದನ್ನು ನಿರ್ಮಾಣ ಮಾಡಬೇಕೆಂದು ನಿರ್ಣಯಿಯಿಸಿದರು. ಸ್ಮಾರಕ ಎಲ್ಲಿ ಆಗಬೇಕು? ಭಾರತದ ಜನರ ಪುನರುತ್ಥಾನಕ್ಕಾಗಿ ಸ್ವಾಮಿ ವಿವೇಕಾನಂದರು 1892 ಡಿಸೆಂಬರ್ 25  ಮತ್ತು 26 ರಂದು  ಎರಡು ದಿನಗಳ ಕಾಲ ಸತತವಾಗಿ  ಕುಳಿತು ಎಲ್ಲಿ ಧ್ಯಾನವನ್ನು ಮಾಡಿದ್ದರೋ ಅಲ್ಲಿಯೇ ಸ್ಮಾರಕವನ್ನು ನಿರ್ಮಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯ್ತು.ಸ್ವರ್ಗೀಯ ಏಕನಾಥ್ ಜಿ ರಾನಡೆಯವರ ಪರಿಶ್ರಮದ ಫಲವಾಗಿ ಇಂದು ಶ್ರೀ ವಿವೇಕಾನಂದರ ರಾಷ್ಟ್ರೀಯ ಸ್ಮಾರಕವು ಕನ್ಯಾಕುಮಾರಿಯಲ್ಲಿ ನಮ್ಮೆಲ್ಲರನ್ನೂ ಸೆಳೆಯುತ್ತದೆ.
1892 ಡಿಸೆಂಬರ್ 25ಮತ್ತು 26 ರಂದು  ಎರಡು ದಿನಗಳ ಕಾಲ ಸ್ವಾಮಿ ವಿವೇಕಾನಂದರು ಸಾಗರದ ಮಧ್ಯೆ ಬಂಡೆಯ ಮೇಲೆ ಕುಳಿತು ತಮ್ಮ ಮುಕ್ತಿಗಾಗಿ, ಆಧ್ಯಾತ್ಮಿಕ ಸಾಧನೆಗಾಗಿ ಧ್ಯಾನವನ್ನು ಮಡಿದ್ದರೆ ಪ್ರಾಯಶ: ಇಂದು ವಿವೇಕಾನಂದರನ್ನು ಈ ಎತ್ತರದಲ್ಲಿ ಜನರು ನೋಡುತ್ತಿರಲಿಲ್ಲವೇನೋ, ಆದರೆ ಆ ಎಡು ದಿನ ಸ್ವಾಮೀಜಿ ಮಾಡಿದ್ದಾದರೂ ಏನು?
ಆಹೊತ್ತಿಗಾಗಲೇ ಭಾರತದ ಎಲ್ಲೆಡೆ ಸಂಚರಿಸಿದ್ದ ವಿವೇಕಾನಂದರಿಗೆ ಭಾರತದ ಅತ್ಯಂತ ಶ್ರೀಮಂತಿಗೆ ಹಾಗೂ ಭಾರತದ ಅತ್ಯಂತ ಬಡತನ, ಭಾರತದ ಅತ್ಯಂತ ಉನ್ನತ ಮಟ್ಟದ ವಿದ್ವಾಂಸರು ಹಾಗೂ ಅತ್ಯಂತ ಅವಿದ್ಯಾವಂತರು…ಹೀಗೆ ಸಮಾಜದ ಎಲ್ಲಾ ಸ್ಥರದ ಪರಿಚಯವು ಚೆನ್ನಾಗಿಯೇ ಆಗಿತ್ತು. ಅಂದಿನ ದಿನಗಳಲ್ಲಿ ಭಾರತದಲ್ಲಿದ್ದ ನೂರಾರು ರಾಜಮಹಾರಾಜರು ಹಾಗೂ ಶ್ರೀಮಂತರು ವಿವೇಕಾನಂದರನ್ನು ಕರೆದು ರಾಜೋಪಚಾರ ಮಾಡಿದರೆ ಬೇಡವೆನ್ನುತ್ತಿರಲಿಲ್ಲ. ಆದರೆ ಸಂಜೆಯ ಸಮಯದಲ್ಲಿ ಊರಿನ ಹೊರಗಿರುವ ಮುರುಕಲು ಜೋಪಡಿಯಲ್ಲಿ ವಾಸವಿರುತ್ತಿದ್ದ ದೀನ ದುರ್ಬಲರು ಕೊಟ್ಟ ಒಣಗಿದ ರೊಟ್ಟಿಯನ್ನು ತಿಂದು ದೇವಸ್ಥಾನದ ಜಗಲಿಯ ಮೇಲೆ ಮಲಗಲು ಬೇಸರ ಪಡುತ್ತಿರಲಿಲ್ಲ. ಎರಡೂ ರೀತಿಯ ಅನುಭವವು ವಿವೇಕಾನಂದರಿಗೆ ಇತ್ತು. ಶ್ರೀಮಂತರ ಮಹಲುಗಳ ಸನಿಹದಲ್ಲೇ ಬಡವರ ಗುಡಿಸಲುಗಳು, ಶ್ರೀಮಂತರ ಐಶಾರಮೀ ಜೀವನ ಒಂದುಕಡೆ ಇದ್ದರೆ, ಒಪ್ಪತ್ತಿನ ಊಟಕ್ಕಿಲ್ಲದೆ ಹಸಿವಿನಿಂದ ನೆರಳುವ, ಮಾನ ಮುಚ್ಚಲು ಬಟ್ಟೆಯಿಲ್ಲದ ನಿರ್ಗತಿಕ ಜನರು ಮತ್ತೊಂದೆಡೆ!!
ದೇವಾಲಯಗಳು ಒಂದೆಡೆಯಾದರೆ ಅದರ ಪಕ್ಕದಲ್ಲಿಯೇ ಕೊಳೆತು ನಾರುವ ಕಸದ ರಾಶಿಗಳು!! ವೇದಮಂತ್ರಗಳ ಧ್ವನಿ  ಎಲ್ಲಿಂದಲೋ ಕಿವಿಗೆ ಬೀಳುತ್ತಿದ್ದರೆ, ಮತ್ತೆಲ್ಲಿಂದಲೋ ನರಳುವ, ಕಿರಿಚಾಡುವ,ಗೋಳಾಡುವ ಧ್ವನಿಯೂ ಕಿವಿಯ ಮೇಲೆ ಬೀಳುತ್ತಿತ್ತು!!
ದೀನ ದಲಿತ, ದುರ್ಬಲ ಜನರ ಗೋಳಾಟವನ್ನು ಕಂಡ ವಿವೇಕಾನಂದರು ಮಮ್ಮಲ ಮರುಗಿದರು. ಏಕೆ ಹೀಗೆ!! ? ಭಾರತದಲ್ಲಿ ಹೇರಳವಾದ ಸಂಪತ್ತೂ ಇದೆ, ಅತ್ಯಂತ ಪ್ರಾಚೀನವಾದ ಜ್ಞಾನ ಸಂಪತ್ತೂ ಇದೆ.  ಆದರೂ ಜನರಲ್ಲಿ ಇಂತಹಾ ದಯನೀಯ ಸ್ಥಿತಿ  ಇದೆಯಲ್ಲಾ!
ಧ್ಯಾನದಲ್ಲಿದ್ದ ಆ ಎರಡೂ ದಿನಗಳೂ ವಿವೇಕಾನಂದರು ಭಾರತದಲ್ಲಿನ  ಜನರ ಕಷ್ಟಗಳನ್ನು  ನಿವಾರಿಸಲು ಸಮಾಜಕ್ಕಾಗಿ ಏನಾದರೂ  ಮಾಡಲೇ  ಬೇಕೆಂಬ ಖಚಿತ ನಿಲುವಿನೊಂದಿಗೆ ಧ್ಯಾನದಿಂದ ಹೊರಬಂದರು.ನಮ್ಮ ದೇಶದ ಅತ್ಯಂತ ಶ್ರೀಮಂತರು ಮತ್ತು ಅತ್ಯಂತ ಬಡವರು, ಈ ಎರಡೂ ವರ್ಗಗಳೊಡನೆ ಅತ್ಯಂತ ನಿಕಟ ಸಂಪರ್ಕವನ್ನಿಟ್ಟುಕೊಂಡು ಅವರೊಡನೆ ಸಮಾಲೋಚಿಸಿ ನಮ್ಮ ರಾಷ್ಟ್ರದ ಅಂದಿನ ಸ್ಥಿತಿಯನ್ನು ಸಂಪೂರ್ಣ ಅವಲೋಕನ ನಡೆಸಿದರು.ಆವರಗಿನ ತಮ್ಮ ದೇಶ ಪರ್ಯಟನೆಯಿಂದ ದೊರೆತಿದ್ದ ಅನುಭವದೊಡನೆ ತನ್ನ ದೇಶದ ಜನರ ನೋವು ನಿವಾರಿಸಲು ಜಗನ್ಮಾತೆ ಕನ್ಯಾಕುಮಾರಿ ಸನ್ನಿಧಿಯಲ್ಲಿ ಆ ಎರಡೂ ದಿನಗಳು ಧ್ಯಾನವನ್ನು ಮಾಡಿದ್ದರು.
ಧ್ಯಾನ ಮಾಡಲು ಆರಿಸಿಕೊಂಡ ಸ್ಥಳವಾದರೋ ಕನ್ಯಾಕುಮಾರಿ ದೇವಾಲದಿಂದ ಎರಡು ಫರ್ಲಾಂಗ್ ದೂರದಲ್ಲಿ ಸಮುದ್ರದ ಮಧ್ಯೆ ಕಾಣುತ್ತಿದ್ದ ಕಲ್ಲು ಬಂಡೆ!! ಆ ಬಂಡೆಯನ್ನು ತಲುಪುವುದಾದರೂ ಹೇಗೆ? ಅಲ್ಲೇ ಹತ್ತಿರದಲ್ಲಿ ಮೀನು ಹಿಡಿಯಲು ಬೆಸ್ತರು ಉಪಯೋಗಿಸುತ್ತಿದ್ದ ದೋಣಿಯವವರನ್ನು ಕೇಳಿದರು. ಆ ದೋಣಿಯವನಾದರೋ “ಒಂದಾಣೆ” ಕೊಡಬೇಕೆಂದ. ಸ್ವಾಮೀಜಿಯೊಡನೆ ಒಂದಾಣೆಯೂ ಇಲ್ಲ!  ಹಿಂದೆ ಮುಂದೆ ನೋಡದೆ ಸ್ವಾಮೀಜಿ ಸಮುದ್ರಕ್ಕೆ ಹಾರಿಯೇ ಬಿಟ್ಟರು!! ಅಲೆಗಳ ಏರಿಳಿತವನ್ನೂ ಲೆಕ್ಕಿಸದೆ ಅದನ್ನೂ ಭೇದಿಸಿಕೊಂಡು ಈಜುಹೊಡೆಯುತ್ತಾ ಎರಡು ಫರ್ಲಾಂಗ್ ದೂರದಲ್ಲಿದ್ದ ಬಂಡೆಯನ್ನು ತಲುಪಿಯೇ ಬಿಟ್ಟರು!! ಬಂಡೆಯಮೇಲೆ ಧ್ಯಾನಸ್ಥಿತಿಯಲ್ಲಿ ಕುಳಿತು ಬಿಟ್ಟರು! ಮನದಲ್ಲಿ ಮುಕ್ತಿಯ ವಿಚಾರವಿಲ್ಲ. ನಮ್ಮ ದೇಶದ ದೀನ ದು:ಖಿತ ಬಂದುಗಳ ಸೊರಗಿದ ಮುಖಗಳೇ, ಹಾಗೂ ದೀನ ಸ್ಥಿಯ ಕಣ್ಣುಗಳೇ ವಿವೇಕಾನಂದರ ಕಣ್ಮುಂದೆ ಸುಳಿದಾಡುತ್ತವೆ. ಹೃದಯದಲ್ಲಿ ದು:ಖ ಉಮ್ಮಳಿಸುತ್ತದೆ. ಮೊದಲೇ ತಿಳಿಸಿದಂತೆ ನಮ್ಮ ದೇಶವು ಒಂದುಕಾಲದಲ್ಲಿ ಸಂಪತ್ ಭರಿತವಾಗಿತ್ತು! ಅತ್ಯಂತ ಮೇಧಾವಿಗಳಿದ್ದ ದೇಶ ಇದು! ನೂರಾರು ಜನ ಋಷಿಮುನಿಗಳು ತಪಸ್ಸು ಮಾಡಿದ ನೆಲ ಇದು! ಆದರೆ…ಇಂತಹ  ಧರ್ಮ ಭೂಮಿಯಲ್ಲಿ ಅದೆಷ್ಟು ಜನ ಉಪವಾಸ ನೆರಳುತ್ತಿದ್ದಾರೆ! ಅದೆಷ್ಟು ಜನರಿಗೆ ಮಾನ ಮುಚ್ಚಲು ಬಟ್ಟೆ ಇಲ್ಲಾ!!  ಈ ಸ್ಥಿತಿಯಿಂದ ನಮ್ಮ ದೇಶವನ್ನು ಪಾರುಮಾಡುವ ಬಗೆಯಾದರೂ ಹೇಗೆ?...........................
ಈ ಲೇಖನ ಮುಂದುವರೆಯುತ್ತದೆ. ಆದರೆ  ಸ್ವಾಮೀ ವಿವೇಕಾನಂದರ ಹೃದಯದಲ್ಲಿ ಇಂತಾ ಚಿಂತನೆಗಳು ಬಂದು ಒಂದುನೂರ ಇಪ್ಪತ್ತು ವರ್ಷಗಳು ಕಳೆದಿವೆ. ಇಂದು ನಮ್ಮ ದೇಶ ಬದಲಾಗಿದೆಯೇ? ಸ್ವಾಮೀ ವಿವೇಕಾನಂದರ ಕನಸಿನಂತೆ       ಭಾರತದ ಪುನರುತ್ಥಾನ ವಾಗಿದೆಯೇ? ನಮ್ಮ ದೇಶದ ಸುಂದರ ಬದುಕನ್ನು ಹಂಬಲಿಸುವ ನಾಗರೀಕ ಬಂಧುಗಳೇ, 2013 ನೇ ವರ್ಷವು ದೇಶದಲ್ಲಿ  ಅತ್ಯಂತ ಮಹತ್ವದ ವರ್ಷವಾಗಲಿದೆ. ಸ್ವಾಮಿ ವಿವೇಕಾನಂದರ 150 ನೇ ಜನ್ಮವರ್ಷವನ್ನು ದೇಶಾದ್ಯಂತ ಆಚರಿಸಲಾಗುವುದು. ಅದರ ಆರಂಭದ ಕಾರ್ಯಕ್ರಮವಾಗಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೆಲೆ ಧ್ಯಾನ ಮಾಡಲು ಕುಳಿತ ದಿನವಾದ ಡಿಸೆಂಬರ್ 25 ರಂದು ದೇಶದೆಲ್ಲೆಡೆ “ಸಂಕಲ್ಪ ದಿನವನ್ನಾಗಿ”ಆಚರಿಸಲಾಗುತ್ತಿದೆ.ಅಂದು ಐದು ನಿಮಿಷ ಗಳ  ಕಾಲ ವಿವೇಕಾನಂದರ ಭಾವಚಿತ್ರದ ಮುಂದೆ ಕುಳಿತು ನಮ್ಮ ದೇಶದ ಇಂದಿನ ಸ್ಥಿತಿಯನ್ನು ಮನದಲ್ಲಿ ಮೂಡಿಸಿಕೊಂಡು  ಸಮಾಜದಲ್ಲಿರುವ ದು:ಖಿತರ  ನೋವು ನಿವಾರಣೆಗಾಗಿ ನಾನೇನು ಮಾಡಬಹುದೆಂದು ಸಂಕಲ್ಪ ಮಾಡುವ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತದೆ. ನಾವಿರುವ ಊರುಗಳಲ್ಲೇ ಕಾರ್ಯಕ್ರಮದ ವಿವರವನ್ನು ಕಾರ್ಯಕರ್ತರೊಡನೆ ಕೇಳಿ   ತಿಳಿದು ಕಾರ್ಯಕ್ರಮದಲ್ಲಿ ಭಾಗವಹಿಸೋಣ.
-ಹರಿಹರಪುರಶ್ರೀಧರ್

Tuesday 11 December 2012

ವಿವೇಕಾನಂದ-150 ಏನು? ಎಂತು?



ಯುವ ಭಾರತ:
“ಆಧುನಿಕ ಪೀಳಿಗೆಯಲ್ಲಿ, ಯುವ ಪೀಳಿಗೆಯಲ್ಲಿ ನನಗೆ ನಂಬಿಕೆಯಿದೆ. ಅವರಿಂದಲೇ ನನಗೆ ಬೇಕಾದ ಕಾರ್ಯಕರ್ತರು ಹೊರಹೊಮ್ಮುತ್ತಾರೆ. ಸಿಂಹದಂತೆ ಅವರು ಸಮಸ್ಯೆಯನ್ನು ನಿವಾರಿಸುತ್ತಾರೆ”. ಸ್ವಾಮಿ ವಿವೇಕಾನಂದರ ನಿರ್ಧಾರ ಹೀಗಿತ್ತು. ಭಾರತದ ಜನಸಂಖ್ಯೆಯ ಶೇಕಡಾ 55 ಜನರು ಯುವಕರು, ಹಿಂದಿನಿಂದಲೂ ಭಾರತವು ಯುವಕರ ದೇಶವಾಗಿದೆ.
ಯುವ ಶಕ್ತಿಯ ಆಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು 18-40 ವರ್ಷ ವಯೋಮಾನದ ವಿದ್ಯಾರ್ಥಿಗಳಲ್ಲದ ಯುವಕರು ಸ್ವಾಮಿ ವಿವೇಕಾನಂದ ಯುವ ಮಂಡಲಿ, ಎಚ್ಚೆತ್ತ ಯುವಕರ ವೇದಿಕೆ, ವಿವೇಕಾನಂದ ಕ್ಲಬ್‌ಗಳ ಮೂಲಕ ಸಕ್ರಿಯರಾಗಲು ಉತ್ತೇಜಿಸಲಾಗುತ್ತದೆ. ಈ ಸಂಘಟನೆಗಳು ಸ್ಥಾನೀಯ ಅವಶ್ಯಕತೆಗಳು ಮತ್ತು ಪ್ರಕೃತಿಗೆ ಅನುಗುಣವಾಗಿ ಕಾರ್ಯವನ್ನು ನಡೆಸುತ್ತವೆ. ಶಕ್ತಿ ಹಾಗೂ ಸುರಕ್ಷೆ, ಸ್ವಾಧ್ಯಾಯ ಮತ್ತು ಸೇವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತವೆ.
ಶಕ್ತಿ: ಸಾಮೂಹಿಕ ಸೂರ್ಯನಮಸ್ಕಾರ” ಕಾರ್ಯಕ್ರಮಗಳನ್ನು ದೇಶದ ಪ್ರತಿಯೊಂದು ನಗರ ಮತ್ತು ಪಟ್ಟಣಗಳಲ್ಲಿ ರಥ ಸಪ್ತಮಿಯಂದು (ಫಬ್ರವರಿ 17, 2012) ನಡೆಸಲಾಗುತ್ತದೆ.
ಸ್ವಾಧ್ಯಾಯ: 2013ರಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಸೇವೆ: ಯುವಕರು ಸೇವಾ ಕಾರ್ಯಗಳಲ್ಲಿ ತೊಡಗುವಂತೆ ಮಾಡಲು “ವಿವೇಕಾನಂದ ಸೇವಾ ಫೆಲೋಶಿಪ್” ಪ್ರಾರಂಭಿಸಕಾಗುತ್ತದೆ.
----------------------------------------------------------------------------
ಸಂವರ್ಧಿನಿ:
“ಶಕ್ತಿಯಿಲ್ಲದೆ ಪುನರುತ್ಥಾನ ಸಾಧ್ಯವಿಲ್ಲ. ನಮ್ಮ ದೇಶವು ಮಿಕ್ಕೆಲ್ಲಾ ದೇಶಗಳಿಗಿಂತ ದುರ್ಬಲವಾಗಲು ಹಾಗೂ ಹಿಂದುಳಿಯಲು ಕಾರಣವೇನು? – ಏಕೆಂದರೆ, ಶಕ್ತಿಯನ್ನು ಅಲ್ಲಿ ಅಪಮಾನಿಸಲಾಗುತ್ತದೆ. ಶಕ್ತಿಯ ಅನುಗ್ರಹವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.
ನಮ್ಮ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸುವಂತಾಗಲು ಸಹಭಾಗಿತ್ವ, ಸೇವಾ, ವಿಕಾಸ, ಸಂಸ್ಕೃತಿ ಮತ್ತು ಸಮರಸತೆ ಹೆಸರುಗಳಲ್ಲಿ ಕಾರ್ಯಕ್ರಮಗಳು ನಡೆಸಲಾಗುತ್ತದೆ.
1. ದಂಪತಿ ಸಮ್ಮೇಳನ – ಸಾಮಾಜಿಕ ಪುನರುತ್ಥಾನದ ಕಾರ್ಯಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಮಹತ್ವದ ಕುರಿತಾಗಿ ಅರಿವು ಮೂಡಿಸಲು ಮತ್ತು ಅಂತಹ ಸಮಯದಲ್ಲಿ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯಕವಾಗುವಂತೆ ಮಾಡಲು, ಅರ್ಧ ದಿನ ಅಥವಾ ಒಂದು ದಿನದ ದಂಪತಿಗಳ ಸಮಾವೇಶ ನಡೆಸಲಾಗುವುದು.
2. ಶಕ್ತಿ ಸಮ್ಮೇಳನ – ಮಹಿಳೆಯು ತನ್ನ ಸಾಮರ್ಥ್ಯವನ್ನು ಮನಗಾಣಲು ಮತ್ತು ರಾಷ್ಟ್ರೀಯ ಪುನರುತ್ಥಾನದ ಕಾರ್ಯದಲ್ಲಿ ತನ್ನ ಪಾತ್ರವನ್ನು ತಿಳಿಯಲು, ಶಕ್ತಿ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇವುಗಳಲ್ಲಿ,
ಅ) ಪ್ರದರ್ಶನ: “ಭಾರತೀಯ ಮಹಿಳೆ – ವಿವಿಧ ಕಾಲಗಳಲ್ಲಿ”, “ಭಾರತದ ವಿವಿಧ ಮಹಿಳಾಮಣಿಗಳು” ಮತ್ತು “ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು”.
ಆ) ಮಹಿಳಾ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಭಾಷಣಗಳು ಮತ್ತು ಪ್ರಶಿಕ್ಷಣಗಳು.
-------------------------------------------------------------------------
ಪ್ರಬುದ್ಧ ಭಾರತ:
ಸ್ವಾಮಿ ವಿವೇಕಾನಂದರು, “ಯಾರು ಇತರರಿಗಾಗಿ ಬದುಕುತ್ತಾರೋ, ಅವರೇ ನಿಜವಾಗಿ ಬದುಕುವವರು. ಇತರರು ಬದುಕಿಯೂ ಸತ್ತಂತೆಯೇ” ಎಂದು ಹೇಳಿದ್ದಾರೆ.
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಗಣ್ಯರು ಮತ್ತು ಬುದ್ಧಿಜೀವಿಗಳಿಗೆ ಬಹಳ ದೊಡ್ಡ ಜವಾಬ್ದಾರಿಯಿದೆ. ಸಮಾಜದ ಎಲ್ಲಾ ರಂಗಗಳಲ್ಲಿರುವ ಇಂತಹ ಚಿಂತಕರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ತೊಡಗಿಸಲು ಈ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ.
1. ವಿಮರ್ಶ: ಪ್ರಮುಖ ವಿಷಯಗಳ ಕುರಿತಾಗಿ ಭಾಷಣಗಳು.
2. ಯೋಗ ಪ್ರತಿಮೆಗಳು (ಯೋಗದ ಆಧಾರದ ಮೇಲೆ ಶಿಕ್ಷಣ ಕೂಟಗಳು). ಹಿರಿಯ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ಅರೆಸೈನಿಕ ಮತ್ತು ರಕ್ಷಣಾಪಡೆಗಳಲ್ಲಿರುವವರು, ಶಾಲಾ ಆಡಳಿತದಲ್ಲಿರುವವರು, ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿರುವವರು, ಸರಕಾರೇತರ ಸಂಸ್ಥೆಗಳ ಪ್ರಮುಖರು ಮತ್ತು ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಪಂಚಾಯತ್ ಅಧ್ಯಕ್ಷರು, ಇತ್ಯಾದಿ ಜನಪ್ರತಿನಿಧಿಗಳಿಗೆ.
3. ಗೋಷ್ಠಿಗಳು – ಸ್ವಾಮಿ ವಿವೇಕಾನಂದರ ವಿಷಯದ ಕುರಿತಾಗಿ, ಚಾರಿತ್ರಿಕ ಮಹತ್ವದ, ನಾಗರೀಕತೆಗೆ ಸಂಬಂಧಿಸಿದಂತೆ ಮಹತ್ವದ ಹಾಗೂ ಸಾಂಸ್ಕೃತಿಕ ಮಹತ್ವದ ಸಂಗತಿಗಳು ಮತ್ತು ವರ್ತಮಾನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತವೆನಿಸುವಂತಹ ವಿಷಯಗಳನ್ನಿಟ್ಟುಕೊಂಡು, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗೋಷ್ಠಿಗಳು ಮತ್ತು ಸಮ್ಮೇಳನಗಳು.
4. ಭಾಗವಹಿಸುವಿಕೆ – ಸ್ವಾಮಿ ವಿವೇಕಾನಂದರ ವ್ಯಕ್ತಿ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ಮಾಣದ ಸಂದೇಶವನ್ನಿಟ್ಟುಕೊಂಡು ಬುದ್ಧಿಜೀವಿಗಳು ಲೇಖನಗಳನ್ನು ಬರೆಯುವಂತೆ ಮಾಡುವುದು ಮತ್ತು ಮಾತನಾಡುವಂತೆ ಮಾಡುವುದು.
--------------------------------------------------------------------------------------
ಗ್ರಾಮಾಯಣ:
“ಹೊಸ ಭಾರತವು ಏಳಲಿ……..ಅವಳು ಮೇಲೇಳಲಿ – ರೈತನ ಗುಡಿಸಲುಗಳಲ್ಲಿ ನೇಗಿಲುಗಳನ್ನು ಹಿಡಿದುಕೊಂಡು; ಬೆಸ್ತರ ಗುಡಿಸಲುಗಳಲ್ಲಿ,……ಕಿರಾಣಿ ಅಂಗಡಿಗಳಲ್ಲಿ ಅವಳು ಹೊರ ಹೊಮ್ಮಲಿ,  ಮನೆ ಯಲ್ಲಿನ ಒಲೆಗಳಿಂದ ಹೊಮ್ಮಲಿ. ಆಕೆ ತೋಪುಗಳಿಂದ ಹಾಗೂ ಕಾಡುಗಳಿಂದ, ಬೆಟ್ಟ ಹಾಗೂ ಪರ್ವತಗಳಿಂದ ಹೊರಹೊಮ್ಮಲಿ” ಈ ರೀತಿಯಾಗಿ ಕೊಲಂಬೋದಿಂದ ಅಲ್ಮೋರಾವರೆಗಿನ ಭಾಷಣಗಳಲ್ಲಿ ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ.
ಗ್ರಾಮಾಯಣದ ಉದ್ದೇಶ, ಸಮಾಜದಲ್ಲಿ ಗ್ರಾಮ ಜೀವನದ ಕುರಿತಾಗಿ ಹೆಮ್ಮೆಯನ್ನುಂಟು ಮಾಡುವುದು. ದೇಶದಲ್ಲಿರುವ 6 ಲಕ್ಷ ಗ್ರಾಮಗಳನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಲು, ಗ್ರಾಮ ಮಟ್ಟದ ಸಮಿತಿಗಳನ್ನು ಮಾಡಲಾಗುವುದು. ಸ್ಥಾನೀಯ ಪದ್ಧತಿ ಮತ್ತು ಸಂಪ್ರದಾಯಕ್ಕನುಗುಣವಾಗಿ ಅವರು ಕಾರ್ಯಕ್ರಮಗಳನ್ನು ಆಯೋಜಿಸುವರು. ಭಾರತ ಮಾತಾ ಪೂಜನ, ಕಥಾ ಕೀರ್ತನ, ಮೇಳ, “ಮೇರಾ ಗಾಂವ್ ಮೇರಾ ತೀರ್ಥ್”, ಇತ್ಯಾದಿಗಳು.
ನಗರವಾಸಿ ಯುವಕರು ಗ್ರಾಮಗಳಲ್ಲಿನ ಕಾರ್ಯಕ್ಕೆ ಸಮಯ ನೀಡುವಂತೆ ಪ್ರೇರೇಪಿಸಲು, ವಿವೇಕ ಗ್ರಾಮ್ ಅಥವಾ ಅಸ್ಪೃಷ್ಯತೆಯ ಆಚರಣೆಯಿಲ್ಲದ, ಮತಾಂತರ ನಡೆಯದ, ವ್ಯಸನಮುಕ್ತ, ಪೊಲೀಸರ ಹಾಗೂ ನ್ಯಾಯಾಲಯಗಳ ಮೇಲೆ ಅವಲಂಬಿತವಾಗಿರದ, ರಾಸಾಯನಿಕ ಗೊಬ್ಬರಗಳನ್ನುಪಯೋಗಿಸದ ಗ್ರಾಮಗಳ ನಿರ್ಮಾಣಕ್ಕಾಗಿ,  ದೀರ್ಘಕಾಲೀನ ಸೇವಾ ಪ್ರಕಲ್ಪಗಳಲ್ಲಿ ಅವರನ್ನು ತೊಡಗಿಸುವುದು. ನಗರಗಳಲ್ಲಿರುವ ಗ್ರಾಮದಂತಿರುವ ಪ್ರದೇಶಗಳನ್ನೂ ಸಹ ವಿವೇಕ ಬಸ್ತಿಯನ್ನಾಗಿ ಅಭಿವೃದ್ಧಿ ಮಾಡಲಾಗುವುದು.
---------------------------------------------------------------------------------
ಅಸ್ಮಿತಾ:
“ದೇಶದ ಭವಿಷ್ಯವು ದುರ್ಬಲರ   ಜನರ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಅವರನ್ನು ನೀವು ಎಬ್ಬಿಸಬಲ್ಲಿರಾ? ಅವರ ಆಂತರಿಕ ಆಧ್ಯಾತ್ಮಿಕ ಪ್ರಕೃತಿಯನ್ನು ಕಳೆದುಹಾಕದೆ, ಅವರು ಕಳೆದುಕೊಂಡಿರುವ ತಮ್ಮತನವನ್ನು ಅವರಿಗೆ ನೀವು ನೀಡಬಲ್ಲಿರೇನು?” ಈ ರೀತಿಯಾಗಿ ವಿವೇಕಾನಂದರು ಪಂಥಾಹ್ವಾನ ನೀಡಿದರು.
ವನವಾಸಿಗಳಿಗೆ, ಅವರ ಸಾಂಸ್ಕೃತಿಕ ಹಾಗೇ ಮತೀಯ ಸಂಪ್ರದಾಯಗಳೇ ಅವರ ಗುರುತು ಮತ್ತು ಅದೇ ಆ ಸಮಾಜವನ್ನು ಒಂದಾಗಿಡುತ್ತದೆ ಹಾಗೂ ಪ್ರಕೃತಿಗೆ ಅನುಗುಣವಾಗಿರುವಂತೆ ಇಡುತ್ತದೆ. ಸಂಪ್ರದಾಯಗಳು ನಷ್ಟವಾದರೆ ಜನಜಾತಿಗಳು ತಮ್ಮ ಗುರುತು, ನೈತಿಕ ಮೌಲ್ಯಗಳು ಮತ್ತು ಶಾಂತಿಯನ್ನು ಕಳೆದುಕೊಂಡು ಬಿಡುತ್ತವೆ. ಸಮಯವು ಸರಿದಂತೆ ಮುನ್ನಡೆಯಲು, ಸಾಂಸ್ಕೃತಿಕ ಸಂಪ್ರದಾಯಗಳ ಮೂಲಕ ಅಭಿವೃದ್ಧಿ ಹೊಂದಲು ಅವರಿಗೆ ಆತ್ಮವಿಶ್ವಾಸ ಬೇಕು. ಇದಕ್ಕಾಗಿ ವನವಾಸಿ ಕ್ಷೇತ್ರಗಳಲ್ಲಿ, ಅವರಿಗೆ ತಮ್ಮ ಸಂಪ್ರದಾಯಗಳು ಹಾಗೂ ಸಂಸ್ಕೃತಿಗಳಲ್ಲಿ ಶ್ರದ್ಧೆ ಹೆಚ್ಚೆಚ್ಚು ಗಟ್ಟಿಯಾಗುವಂತೆ ಮಾಡಲು “ಸಂಸ್ಕೃತಿಯ ಮೂಲಕ ಅಭಿವೃದ್ಧಿ” ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
1. ಜನಜಾತಿ ವೇದಿಕೆಗಳ ಸಮ್ಮೇಳನಗಳು
2. ಗ್ರಾಮೀಣ ಮುಖ್ಯಸ್ಥರ ಸಭೆಗಳು
3. ದೇಶೀಯ ನಂಬಿಕೆಗಳನ್ನು ಗಟ್ಟಿಮಾಡಲು ಜನಜಾತಿ ಉತ್ಸವ ಪೂರ್ಣ ಬೆಂಬಲ.
4. ಸಂಪ್ರದಾಯ, ವೈಜ್ಞಾನಿಕ ಆಧಾರ ಮತ್ತು ಮುಂದುವರಿಕೆಯ ಕುರಿತಾಗಿ ವಿಚಾರ ಸಂಕಿರಣಗಳು.
5. ಸ್ವಾಮೀಜಿಯವರ ಕುರಿತಾಗಿ ಮತ್ತು ಅವರ ಸಂದೇಶವನ್ನು ಸಾರುವ ವಿಡಿಯೋಗಳು.

Sunday 25 November 2012

Karnataka: State Committee of Swamy Vivekananda-150th Birth Anniversary Celebration Inaugurated

Inauguration of Swamy Vivekananda -150 birth anniversary celebration Committee at Bangalore Nov-25-2012















November 25th, 2012, 7:57 pm
Bangalore November 25, 2012: Initiated by Rashtreeya Swayamsevak Sangh Karnataka, a state level committee was inaugurated to celebrate the 150th birth anniversary of Swamy Vivekananda, state-wide. The inaugural ceremony was held at BMS Engineering college Auditorium at Basavanagudi, Bangalore.

Justice (Rtd) Shivaraj Patil, former Supreme Court Judge, will be the Hon. President of Swamy Vivekananda-150th Birth Celebration committee of Karnataka. Launching a 53 membered team,  Justice (Rtd) Shivaraj Patil said ” Swamy Vivekananda’s life and message to be carried forward, the committee will engage several activities throughout the year, with a socio-academic perspective”

Prominent social workers, Academicians, Professionals, noted personalities were included in the State Committee. As President Dr. M. Mohan Alva, Chairman, Alvas Education Foundation (R) Moodbidri, as Vice Presidents Dr. Chidananda Gowda, Former Vice-Chancellor, Kuvempu University, Dr. Balasubrahmanyam, Founder, Vivekananda Youth Movement, H.D. Kote, Dr. Meena Chandavarkar, Vice-Chancellor, Karnataka State Women University, Bijapur, Dr. G.S. Patil, Vice-Chancellor, Karnataka Law University, Dharwad, will be part of the committee.

RSS Karnataka Pranth Karyavah N Tippeswamy will the General Secretary for the State Committee.

Senior RSS Functionaries Mai Cha Jayadev, Kru Narahari, N Tippeswamy, CR Mukunda and several other RSS functionaries were present during the occasion.

A website, vivek150.org  to mobilize the activities of the committee and also imbuing the various messages of Vivekananda was launched during the occasion.

Justice (Rtd) Shivaraj Patil, former Supreme Court Judge, will be the president of Swamy Vivekananda-150th Birth Celebration committee of Karnataka, speaks on the occasion

Inauguration of SV-150 Committee Nov-25-2012
Swami Vivekananda 150th Birth Celebration Committee – Karnataka

 The Committee:

Honorary President

Dr. Shivaraj V. Patil, Rtd. Justice, Supreme Court of India

President

Dr. M. Mohan Alva, Chairman, Alvas Education Foundation (R) Moodbidri

Vice-Presidents

Dr. Chidananda Gowda, Former Vice-Chancellor, Kuvempu University

Dr. Balasubrahmanyam, Founder, Vivekananda Youth Movement, H.D. Kote

Dr. Meena Chandavarkar, Vice-Chancellor, Karnataka State Women University, Bijapur

Dr. G.S. Patil, Vice-Chancellor, Karnataka Law University, Dharwad

Secretary

Sri Na. Thippeswamy, Executive Committee Member, Mythic Society, Bangalore

Joint Secretary

Dr. Raghu Akmunchi, Professor, Hubli

Treasurer: Sri Shankara Nayak, Industrialist, Bangalore

Joint Treasurer : Sri Naresh Chirania, Industrialist, Bellary

Honorary Members

Dr. H. Sudarshan, Founder, Vivekananda Girijana Kalyana Kendra, B.R. Hills

Sri Shankara Bidari, I.A.S. Rtd. Bangalore

Dr. Siddalingaiah, Chairman, Kannada Pustaka Pradhikara, Bangalore

Dr. Gururaja Karajagi, Educationalist, Bangalore

Sri K. Jairaj I.A.S. Rtd. Bangalore

Dr. Vivek Javali, Cardiologist, Bangalore

Sri Arjun Devaiah, International Athlete, Bangalore

Sri T.S. Nagabharana, Cine Director, Bangalore

Sri Nagananda, Advocate, Bangalore

Sri Balaveeras Reddy, Former Vice-Chancellor, VTU Belgaum

Smt. Susheelamma, Sumangali Sevashrama, Bangalore

Smt. Tejaswini Ananth Kumar, Chariman, Adamya Chetana Bangalore

Dr. Vijayalakshmi Balekundri,  Cardiologist, Bangalore
Sri Raghuram Y.N. Yoga Bharati, U.S.A.
Dr. Philip Louis, Industrialist, Bangalore

Prof. Chandrashekhar, Chairman, Silicon City College, Bangalore

Sri Suhas Gopinath, Industrialist, Bangalore

Sri Ma. Nagaraj, Former Member, K.P.S.C. Bangalore

Dr. K.R, Venugopal, Principal, U.V,C.E. Bangalore

Sri M. Narayana Reddy, Advocate, Bangalore

Sri Sidyu Nayak, Social Worker, Bangalore

Sri Balandur Kempaiah, Chairman, Janapada Academy, Bangalore

Sri K.B, Ganapati, Editor, Star of Mysore

Dr. K. Anantharam, Rtd. Professor, Mysore

Sri Jagannatha Shenoy, Industrialist, Mysore

Sri A. Vishwanath, Chartered Accountant, Mysore

Sri P.L. Suresh Raju, Civil Engineer, Chitradurga

Sri T.S, Jayarudresh, Industrialist, Davanagere

Dr. S. Vinayak, Secretary, Vinayaka Group of Institutions, Javagal

Sri Bheemeshwara Joshy, Dharmadashi, Srikshetra Horanadu

Dr. P.L. Dharma, H.O.D. Dept. of Political Science, Mangalore University

Sri Mattar Rathnakara Hegde, Advocate, Udupi

Dr. B. Yashovarma, Secretary, Sri Dharmasthala Manjunatheshwara Education Society, Dharmasthala

Sri Keshava Prasad Muliya, Industrialist, Puttur

Dr. Jadaye Gowda, Professor, College of Forestry, Ponnampet

Dr. G.B. Nandan, H.O.D. Dept. of Political Science, Karnataka University, Dharwad

Sri Vijaya Sankeshwara, Chairman, VRL Group of Companies

Sri Suresh Handre, Industrialist, Belgaum

Sri Allam Gurubasavaraj, Chairman, Veerashaiva Vidyavardhaka Sangha, Bellary

Sri Rahul Baldota, Executive Director, MSPL Ltd. Hospet

Dr. B.F. Dandina, Founder President, Kanakadasa Education Society, Gadag

Prof. Basavaraja Moolimani, Vice-Chancellor, B.L.D.E. University, Bijapur

Sri VEnkatraddi Davraddi Kamraddi, President, Bar Association, Dharwad

Sri G.V. Srinivas, Chairman, Maruthi International School, Tumkur

Sri C.S. Hanumantharaju, Director, Milk Producers Co-operative Federation, Tumkur

Sri Mallappa, President, Arunachaleshwara Temple, Harohalli

Co-ordinators (Karnataka South)

Sri M. Neelaiah, Rtd. District Education Officer, Bangalore

Sri Sadashiva, Social Worker, Bangalore

Co-ordinators (Karnataka North)
Sri Krishna Joshi, Socail Worker, Gulbarga

Programmes Ahead:

2012 December 25: Sankalpa Diwas

2012 January 12: “Yuva Din” and Beginning of Celebrations

2013 February 17 : Mass Surya Namaskara
2013 March-April:  Seminars
2013 September 11:  Bharat Jago –

2013 : Youth Conference

2013 November: Rural Campaign

2014 January 12: Valedictory Programme
--





Wednesday 12 September 2012

ಚಿಕಾಗೋದಲ್ಲಿ ಹರಿದ ವಿವೇಕಾಮೃತ ಧಾರೆ


ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು.

ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ ಜರುಗಿತ್ತು.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ರೈಲು ತಮ್ಮೂರನ್ನು ಹಾದುಹೋಗಲಿದೆ ಎಂದರಿತ ಒಂದು ಊರಿನ ಜನ ತಮ್ಮ ಊರಿನಲ್ಲಿ ರೈಲು ನಿಲ್ಲಿಸುವಂತೆ ಕೇಳಿಕೊಂಡರು. ಅದನ್ನು ನಿಯಮ ಬಾಹಿರವೆಂದು ಸ್ಟೇಷನ್ ಮಾಸ್ಟರ್ ನಿರಾಕರಿಸಿದಾಗ ಅವರು ಗೋಗರೆದರು. ಆಗಲೂ ಕೇಳುವ ಲಕ್ಷಣಗಳು ಕಾಣದಾದಾಗ ಊರಿನ ಜನ ರೈಲು ಹಳಿಗಳ ಮೇಲೆ ಅಂಗಾತ ಮಲಗಿಬಿಟ್ಟರು. ಶ್ರೇಷ್ಠ ಸಂತನೊಬ್ಬನ ಪಾದಸ್ಪರ್ಷ ನಮ್ಮೂರಿನ ನೆಲಕ್ಕೆ ಆಗಲಿಲ್ಲವೆಂದರೆ ನಮ್ಮೆಲ್ಲರ ಬದುಕು ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು. ರೈಲು ಬಂತು. ಆಜನರು ಹಳಿಯಿಂದ ಅಲುಗಾಡುವ ಲಕ್ಷಣ ಕಾಣದಿದ್ದಾಗ ಸ್ಟೇಷನ್ ಮಾಸ್ಟರ್ ಗಾಬರಿಗೊಂಡು ನಿಲುಗಡೆ ಸೂಚಿಸಿದ. ಆಜನ ಫ್ಲಾಟ್‌ಫಾರಮ್‌ನತ್ತ ಧಾವಿಸಿದರು. ಸ್ವಾಮೀಜಿ ಮೆಟ್ಟಿಲ ಬಳಿ ಬಂದು, ನಿಂತಿದ್ದ ಜನರತ್ತ ಕೈಬೀಸಿದರು. ರೈಲು ಮತ್ತೆ ಹೊರಟಿತು.
ಅಬ್ಬ! ಇದು ವ್ಯಕ್ತಿಯೊಬ್ಬನಿಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ. ಆತನ ಚಿಂತನೆಗಳನ್ನು ಅನುಸರಿಸುತ್ತ ಜೀವ ತೆರುವುದು ಒಂದೆಡೆಯಾದರೆ ಆತನಿಗಾಗಿ ಬಯಸಿ ಪ್ರಾಣ ಕೊಡಲು ಸಿದ್ಧವಾಗುವುದು ಮತ್ತೊಂದು. ಸ್ವಾಮೀಜಿ ಎರಡೂ ರೀತಿಯ ಅನುಯಯಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು.
ಅವರು ಹುಟ್ಟಿದ್ದ ಕಾಲಘಟ್ಟವೇ ಅಂಥದ್ದು. ಒಂದೆಡೆ ಮುಸ್ಲಿಮರ ಆಕ್ರಮಣದ ತೀವ್ರ ಪರಿಣಾಮವಾಗಿ, ದೀರ್ಘಕಾಲ ಸ್ವಂತಿಕೆ ಮರೆತುಬಿಟ್ಟಿದ್ದ ಭಾರತ; ಮತ್ತೊಂದೆಡೆ ಇದರ ಹಿಂದುಹಿಂದೆಯೇ ಕ್ರಿಶ್ಚಿಯನ್ನರ ಆಕ್ರಮಣಕ್ಕೆ ಒಳಗಾಗಿ ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದ ಇಲ್ಲಿನ ಸಮಾಜ. ಈ ದೃಷ್ಟಿಯಿಂದ ನೋಡಿದರೆ ಬಂಗಾಳ ಇಡಿಯ ಭಾರತದ ಸಣ್ಣ ರೂಪವಾಗಿತ್ತು. ಹೀಗಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಬ್ಬರೂ ಬಂಗಾಳವನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಕಾರ್ಯ ವಿಸ್ತರಿಸಿದರು. ಅದಕ್ಕೇ ಭಗವಂತನೂ ತನ್ನ ಲೀಲಾಕಾರ್ಯಕ್ಕೆ ಬಂಗಾಳವನ್ನೇ ವೇದಿಕೆ ಮಾಡಿಕೊಳ್ಳಬೇಕಾಯ್ತು.
ಬುದ್ಧಿವಂತ ಬಂಗಾಳಿಗಳು ಮುಸಲ್ಮಾನ ಪರಂಪರೆಯಿಂದ ವಿಮುಖರಾಗಲು ಅರಸುತ್ತಿದ್ದ ದಾರಿಯಲ್ಲಿ ಏಸುಕ್ರಿಸ್ತ ಬಂದು ನಿಂತ. ರಾಜಾಶ್ರಯವೂ ಇದ್ದುದರಿಂದ ಬುದ್ಧಿಜೀವಿಗಳು ಬಲುಬೇಗ ಏಸುಕ್ರಿಸ್ತನನ್ನು ತಬ್ಬಿಕೊಂಡವು. ಕ್ರಿಸ್ತ ಮತ್ತವನ ಅನುಯಾಯಿಗಳ ಗುಣಗಾನವನ್ನು ನಮ್ಮವರೇ ಜೋರುಜೋರಾಗಿ ಮಾಡತೊಡಗಿದರು. ಹಿಂದೂ ಸಮಾಜ ಅಲ್ಲಾಹನ ಕಬಂದ ಬಾಹುಗಳಿಂದ ಬಿಡಿಸಿಕೊಳ್ಳಲು ಹೋಗಿ ಕ್ರಿಸ್ತನ      ಉಸಿರುಗಟ್ಟಿಸುವಂತಹ ಅಪ್ಪುಗೆಯಲ್ಲಿ ಸಿಕ್ಕಿಹಾಕಿಕೊಂಡಿತು. ಆಗ ಹಿಂದೂ ಸಮಾಜ ಕಂಡುಕೊಂಡ ಪರಿಹಾರವೇ ಶ್ರೀರಾಮಕೃಷ್ಣ.
ಬಡತನದಲ್ಲಿ ಹುಟ್ಟಿ ಬದುಕಿನುದ್ದಕ್ಕೂ ಸಿರಿವಂತರನ್ನು ಕಾಲಬುಡಕ್ಕೆ ಕೆಡವಿಕೊಂಡವರವರು; ತಾವು ಶಾಲೆಗೆ ಹೋಗಲಿಲ್ಲವಾದರೂ ಇಂಗ್ಲೀಷಲ್ಲಿ ಪುಟಗಟ್ಟಲೆ ಉದ್ಧರಿಸಬಲ್ಲವರನ್ನು ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ಪಾಠ ಹೇಳಿದವರು; ಹುಟ್ಟಿನಿಂದ ಬ್ರಾಹ್ಮಣರಾದರೂ ಅಂತ್ಯಜರ ಸೇವೆಗೆ ಕಟಿಬದ್ಧರಾದವರು; ಸಾಧನೆಯ ವಿಷಯದಲ್ಲಂತೂ ಎಲ್ಲ ಪಂಥಗಳನ್ನು ಒಂದು ಮಾಡಿ ಸಾಕ್ಷಾತ್ಕರಿಸಿಕೊಂಡವರು. ಇಂತಹ ಮೂಲ ವಿಗ್ರಹಕ್ಕೆ ಉತ್ಸವ ಮೂರ್ತಿಯಾಗಿ ಜವಾಬ್ದಾರಿ ನಿರ್ವಹಿಸಿದವರು ಸ್ವಾಮಿ ವಿವೇಕಾನಂದ.
ನರೇಂದ್ರನಾಗಿದ್ದ ತರುಣ ವಿವೇಕಾನಂದನಾಗಿ ರೂಪುಗೊಂಡಿದ್ದು ರಾಮಕೃಷ್ಣರ ಗರಡಿಯಲ್ಲಿಯೇ. ಅದುಬಿಡಿ. ಮರಣ ಶಯ್ಯೆಯಲ್ಲಿ ರಾಮಕೃಷ್ಣರು ವಿವೇಕಾನಂದರನ್ನು ಕರೆದು ನು ಜಗತ್ತಿಗೆ ಶಿಕ್ಷಣ ಕೊಡುವೆಎಂದಾಗ ಯಾವ ವಿಶ್ವಧರ್ಮ ಸಮ್ಮೇಳನದ ಉಲ್ಲೇಖವೂ ಇರಲಿಲ್ಲ. ಆಗಿನ್ನೂ ೧೮೮೬. ಮುಂದೆ ಸರ್ವಧರ್ಮ ಸಮ್ಮೇಳನ ನಡೆದಿದ್ದು ಅದಾದ ೭ ವರ್ಷಗಳ ನಂತರ, ೧೮೯೩ರಲ್ಲಿ. ಹೇಗಿದೆ ವರಸೆ?



ಚಿಕಾಗೋದಲ್ಲಿ ಸ್ವಾಮೀಜಿ


ನರೇಂದ್ರ ಗುರುಗಳ ದೇಹತ್ಯಾಗದ ನಂತರ ದೇಶ ತಿರುಗಿದ. ಸಾಧನೆಯಲ್ಲಿ ಶ್ರೇಷ್ಠ ಹಂತವನ್ನೇರಿದ. ಹೃದಯದ ಆಗಸವನ್ನು ವಿಸ್ತಾರಗೊಳಿಸಿಕೊಂಡು ಬಡವರಿಗಾಗಿ ಮರುಗಿದ. ಅಜ್ಞಾನಿಗಳಿಗಾಗಿ ಕಣ್ಣೀರಿಟ್ಟ. ಅವರಿಗಾಗಿ ಬದುಕಿನ ಪ್ರತಿಕ್ಷಣವನ್ನೂ ಅರ್ಪಿಸುವ ನಿರ್ಧಾರ ಕೈಗೊಂಡ. ಆಗಲೇ ಸರ್ವಧರ್ಮ ಸಮ್ಮೇಳನದ ತಯಾರಿ ಶುರುವಾಗಿತ್ತು. ಅದೆಲ್ಲಿಂದ ಸೂಚನೆ ದೊರಕಿತ್ತೋ? ಅದೊಂದು ದಿನ ಸ್ವಾಮೀಜಿ ಸೋದರ ಸನ್ಯಾಸಿಯೊಬ್ಬರ ಬಳಿ ಅದೆಲ್ಲ ವೈಭವದ ಕಾರ್ಯಕ್ರಮ ನಡೆಯುತ್ತಿರುವುದು ಯಾರಿಗಾಗಿ ಗೊತ್ತೇನು? ಇವನಿಗಾಗಿಎಂದು ತಮ್ಮ ಎದೆಯತ್ತಲೇ ಬೆಟ್ಟು ಮಾಡಿದರು. ಜೊತೆಯಲ್ಲಿದ್ದವರಿಗೆ ಇದೊಂದು ಹುಚ್ಚು ಎಂದುಕೊಳ್ಳದೆ ವಿಧಿಯಿರಲಿಲ್ಲ.
ಇಷ್ಟಕ್ಕೂ ಸರ್ವಧರ್ಮ ಸಮ್ಮೇಳನ ಆಯೋಜನೆಯಾಗಿದ್ದೇಕೆ ಗೊತ್ತೇನು? ಕೊಲಂಬಸ್ ಅಮೆರಿಕ ಕಂಡುಹಿಡಿದು ನಾಲ್ಕುನೂರು ವರ್ಷಗಳಾಗಿಬಿಟ್ಟಿತ್ತು. ಈ ನಾಲ್ಕು ಶತಕಗಳಲ್ಲಿ ಪಶ್ಚಿಮ ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಆಗಬೇಕಿತ್ತು. ಈ ಹಿಂದೆ ಆದ ಇದೇ ರೀತಿಯ ಎರಡು ಕಾರ್ಯಕ್ರಮಗಳಲ್ಲಿ ಲಕ್ಷ ಲಕ್ಷ ಜನ ಭಾಗವಹಿಸಿದ್ದರು. ಹೀಗಾಗಿ ಈ ಬಾರಿಯ ಪ್ರಯತ್ನ ಅದ್ದೂರಿಯೂ ವಿಶೇಷವೂ ಆಗಿರುವುದು ಅನಿವಾರ್ಯವಿತ್ತು. ಅದಕ್ಕಾಗಿ ಜಗತ್ತಿನೆಲ್ಲ ಮತಪಂಥಗಳವರನ್ನು ಒಟ್ಟಿಗೆ ಸೇರಿಸುವ ಅವರ ಮಾತುಗಳನ್ನು ಕೇಳುವ, ಕೊನೆಗೆ ಕ್ರಿಶ್ಚಿಯನ್ ಪಂಥವೇ ಎಲ್ಲರಿಗಿಂತ, ಎಲ್ಲಕ್ಕಿಂತ ಶ್ರೇಷ್ಠವೆಂದು ಸಾರುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವತಃ ಪೋಪ್ ಇದನ್ನು ಧಿಕ್ಕರಿಸಿದ್ದ. ಕ್ರಿಶ್ಚಿಯನ್ ಮತಕ್ಕೆ ಸರಿಸಮವಾಗಿ ಇತರರನ್ನು ಕೂರಿಸುವ ವಿಚಾರವೇ ಅವರಿಗೆ ಹಿಡಿಸಿರಲಿಲ್ಲ. ಅಂತೂ ಕಾರ್ಯಕ್ರಮದ ದಿನ ನಿರ್ಧಾರವಾಯಿತು. ಸೂತ್ರಧಾರ ಡಾ.ಬರೋಸ್ ಅನೇಕ ದೇಶಗಳನ್ನು ಸುತ್ತಾಡಿದ. ಎಲ್ಲ ಮತಪಂಥದವರನ್ನು ಕಾರ್ಯಕ್ರಮಕ್ಕೆ ಬರುವಂತೆ ಮನ ಒಪ್ಪಿಸುವ ಕೆಲಸ ಮಾಡಿದ. ಆದರೆ ಭಾರತದ ಸಂತರು ಒಪ್ಪಲಿಲ್ಲ. ಕೊನೆಗೆ ಗರ ದಾಟಿ ಬಂದು ನಿಮ್ಮ ಧರ್ಮದ ಶ್ರೇಷ್ಠತೆ ಜಗತ್ತಿಗೆ ತಿಳಿಸಲಿಲ್ಲವೆಂದರೆ ಜಗತ್ತಿಗೆ ಕೊಡಲು ಹಿಂದೂ ಧರ್ಮದಲ್ಲಿ ಏನೂ ಇಲ್ಲವೆಂದು ಭಾವಿಸಿಬಿಡುತ್ತಾರೆಎಂದು ಹೆದರಿಸಿದ. ಯಾರೂ ತಲೆಬಾಗಲಿಲ್ಲ. ಬ್ರಾಹ್ಮಣ ಅಡುಗೆ ಭಟ್ಟರಿರುವ ಪ್ರತ್ಯೇಕ ಹಡಗು ನಿಮಗಾಗಿ ವ್ಯವಸ್ಥೆ ಮಾಡಿಸುತ್ತೇನೆ ಎಂದು ವಾಗ್ದಾನ ಮಾಡಿದ. ಆಗಲೂ ಯಾರೂ ಒಪ್ಪಿಕೊಳ್ಳಲಿಲ್ಲ. ಹಿಂದೂ ಧರ್ಮ ಮಾತ್ರ ಕ್ರಿಶ್ಚಿಯನ್ನರ ಎದುರು ನಿಲ್ಲಬಲ್ಲದೆಂಬ ಅರಿವು ಅವರಿಗಿತ್ತು. ಹೀಗಾಗಿ ಹೇಗಾದರೂ ಮಾಡಿ ಹಿಂದೂ ಸಂತರನ್ನೊಯ್ದು ಕ್ರಿಶ್ಚಿಯನ್ ಶ್ರೇಷ್ಠತೆ ಸಾಬೀತು ಮಾಡಲು ಸಾಧ್ಯವಾದರೆ ಸಾಕು ಎಂಬುದು ಅವರ ಗುರಿ.



ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ ಸ್ವಾ,ಮೀಜಿ


ಅವರ ದುರ್ದೈವ. ಹಿಂದೂ ಧರ್ಮದ ಪ್ರತಿನಿಧಿಯಾಗಿ ಜಗದ ವೇದಿಕೆ ಮೇಲೆ ಸ್ವಾಮಿ ವಿವೇಕಾನಂದರು ನಿಂತುಬಿಟ್ಟರು. ಅವರು ಅಲ್ಲಿಗೆ ಹೋಗಿದ್ದು, ವಿಳಾಸ ಕಳಕೊಂಡು ಪರದಾಡಿದ್ದು, ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುವ ಚಿಂತನೆ ಮಾಡಿದ್ದು, ಹಾಗೆಯೇ ವೆದಿಕೆ ಮೇಲೆ ವಿಶೇಷ ಅತಿಥಿಯಾಗಿ ಕುಳಿತಿದ್ದು. ಎಲ್ಲವೂ ರೋಚಕ ಕಥೆಯೇ.
೧೮೯೩ರ ಸೆಪ್ಟೆಂಬರ್ ೧೧ಕ್ಕೆ ದೊಡ್ಡದೊಂದು ಗಂಟೆಯ ಸದ್ದಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೊದಲು ಮಾತನಾಡಿದ ಆರ್ಚ್ ಬಿಷಪ್ ಜಾಂಟೆಗೆ ಭಾರೀ ಕರತಾಡನದ ಸ್ವಾಗತ ಸಿಕ್ಕಿತು. ಮೊದಲು ಮಾತನಾಡಿದ್ದಕ್ಕಾಗಿ ಆ ಗೌರವ. ನಡುವೆ ಮಾತನಾಡಿದ ಬ್ರಹ್ಮ ಸಮಾಜದ ಮಜುಮ್‌ದಾರರಿಗೂ ಅಷ್ಟೆ ಗೌರವ ಸಿಕ್ಕಿತು. ಅದಾಗಲೇ ಮಜುಮ್‌ದಾರರ ಲೇಖನಗಳು ಪಶ್ಚಿಮದ ಕದತಟ್ಟಿ ಅವರು ಖ್ಯಾತರಾಗಿದ್ದರು. ಹೀಗಾಗಿ ಅಮೆರಿಕನ್ನರು ಅವರನ್ನು ಗುರುತಿಸಿ ಚಪ್ಪಾಳೆ ಹೊಡೆದರು. ಚೀನಾದ ಫುಂಗ್ ಕ್ಯುಂಗ್ ಯೋಗೂ ವಿಶೇಷ ಗೌರವ ಸಿಕ್ಕಿತು. ಚೀನಾದ ಕುರಿತಂತೆ ಅಮೆರಿಕಾದ ಧೋರಣೆಯನ್ನು ವಿರೋಧಿಸುತ್ತಿದ್ದವರ ಗೌರ ಅದು. ಸ್ವಾಮೀಜಿ ಸಿಂಹದಂತೆ ಕುಳಿತಿದ್ದರು. ವೇದಿಕೆ ಮೇಲೆ ಅವರಿಗೆ ಸಿಕ್ಕಿದ್ದೂ ವಿಶೇಷ ಜಾಗವೇ. ಆದರೆ ಅವರು ಭಾಷಣಕ್ಕೆ ಹಿಂದೇಟು ಹಾಕುತ್ತಿದ್ದರು. ಕೊನೆಗೂ ಭಾಷಣದ ಅಂತಿಮ ಅವಧಿಯಲ್ಲಿ ಅವರು ಮಾತಾಡಲೇಬೇಕಾಯ್ತು. ಅವರು ಎದ್ದು ನಿಂತೊಡನೆ ಸಭೆಯಲ್ಲಿ ನೀರವತೆ ಆವರಿಸಿತು. ಮಾತು ಹರಿಯುವ ನೀರಿನಂತೆ ಶುರುವಾಯಿತು. ಮೊದಲ ಐದು ಪದಗಳಿಗೆ ಅಚ್ಚರಿಯೆನಿಸುವಷ್ಟು ಕರತಾಡನ. ಕಾರಣವೇ ಇಲ್ಲದೆ ಸಿಕ್ಕ ಅಪರೂಪದ ಗೌರವ ಅದು. ವೇದಿಕೆ ಮೇಲಿದ್ದವರಿಗೆ ಗಾಬರಿ. ಅದಾದ ಮರುಕ್ಷಣದಲ್ಲಿ ಸ್ವಾಮೀಜಿಯವರ ಮಾತು ಪ್ರವಾಹವಾಯಿತು. ಭಾರತ – ಹಿಂದೂ ಧರ್ಮಗಳು ಒಂದಕ್ಕೊಂದು ಪೂರಕವಾಗಿ ಶಾಂತಿಯ, ವಿಶ್ವಭ್ರಾತೃತ್ವದ ಮಾತುಗಳು ಅಂತರಾಳದಿಂದ ಹೊಮ್ಮಿಬಂದವು. ಅದು ಬರೆದುಕೊಂಡು ಬಂದು ಓದಿದ ರೆಡಿಮೇಡ್ ಸಾಹಿತ್ಯವಾಗಿರಲಿಲ್ಲ. ಹೃದಯ ತಂತಿ ಮೀಟಿದಾಗ ಹೊಮ್ಮಿದ ಸಂಗೀತವಾಗಿತ್ತು. ಆಜನ ತಲೆದೂಗಿದರು. ಬಾಯಿ ಕಳಕೊಂಡರು. ಭಾವುಕರು ಕಣ್ಣೀರಾದರು. ಒಟ್ಟಿನಲ್ಲಿ, ಮೊದಲ ಜಯ ಸ್ವಾಮೀಜಿಗೆ ದಕ್ಕಿಬಿಟ್ಟಿತ್ತು. ನಿಸ್ಸಂಶಯವಾಗಿ ಈ ಸಮ್ಮೇಳನದ ನಿಜವಾದ ಹೀರೋ ಸ್ವಾಮಿ ವಿವೇಕಾನಂದರೇ!ಪತ್ರಿಕೆಯೊಂದು ಉದ್ಗರಿಸಿತು. ಇವನ ದೇಶಕ್ಕೆ ಮಿಷನರಿಗಳನ್ನು ಕಳಿಸಿಕೊಡುವುದಿರಲಿ, ನಾವೇ ಇವನ ದೇಶದಿಂದ ಇಂತಹವರನ್ನು ಕರೆಸಿಕೊಂಡು ಪಾಠ ಕಲಿಯಬೇಕುಮತ್ತೊಂದು ಪತ್ರಿಕೆ ನೊಂದು ಹೇಳಿತು. ಹಿಂದಿನ ದಿನದವರೆಗೆ ಯಾರಿಗೂ ಗೊತ್ತಿರದಿದ್ದ ಸ್ವಾಮಿ ವಿವೇಕಾನಂದ ಈಗ ದೇಶದ ಮೂಲೆಮೂಲೆಗಳಲ್ಲಿ ಪರಿಚಿತನಾಗಿದ್ದ. ಇಂದಿಗೂ ಅಮೆರಿಕನ್ನರಿಗೆ ಈ ಕುರಿತ ಅಹಂಕಾರ ಇದೆ.   ನೀವು   ಸ್ವಾಮಿ ವಿವೇಕಾನಂದರನ್ನು ನಮಗೆ ಕೊಟ್ಟಿರಿ. ನಾವು ವಿಶ್ವಪ್ರಸಿದ್ಧ ವಿವೇಕಾನಂದರನ್ನು ನಿಮಗೆ ಮರಳಿಸಿದೆವುಎಂದವರು ಹೆಮ್ಮೆಯಿಂದ ಹೇಳುತ್ತಾರೆ.



ಸಮ್ಮೇಳನದ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸ್ವಾಮೀಜಿಯ ಮಾತುಗಳೆ ಪ್ರಮುಖವಾದವು. ಕಾರ್ಯಕ್ರಮದ ಕೊನೆಯಲ್ಲಿ ಸ್ವಾಮೀಜಿ ಆಡುವ ಹತ್ತು ನಿಮಿಷದ ಮಾತುಗಳಿಗಾಗಿ ಜನ ಎರೆಡೆರಡು ಗಂಟೆ ಬೇರೆಯವರ ಕೊರೆತ ಕೇಳುತ್ತ ಕುಳಿತಿರುತ್ತಿದ್ದರು. ಹಿಂದೂ ಧರ್ಮದ ಕುರಿತಂತೆ ವಿಸ್ತೃತ ಭಾಷಣವಿರಲಿ, ಬೌದ್ಧ ಸನ್ಯಾಸಿ ಧರ್ಮಪಾಲರ ಕೋರಿಕೆಯ ಮೇರೆಗೆ ಬುದ್ಧನ ಬಗ್ಗೆಯೂ ಸುಂದರ ಉಪನ್ಯಾಸ ನೀಡಿದರು. ಸ್ವಾಮೀಜಿಯವರ ಕಾರಣದಿಂದಾಗಿ ಸಮ್ಮೇಳನದ ಆವರಣ ಕಿಕ್ಕಿರಿದು ತುಂಬುತ್ತಿತ್ತು. ಹೀಗಾಗಿ ಸಮ್ಮೇಳನದ ಸ್ಥಳವನ್ನೆ ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಬಂತು. ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಸ್ವಾಮೀಝಿಯವರ ಕಟೌಟ್‌ಗಳನ್ನು ನಿಲ್ಲಿಸಿದ್ದಲ್ಲದೆ, ಅವರ ಮುಂದಿನ ಕಾರ್ಯಕ್ರಮಗಳ ವಿವರವನ್ನೂ ಲಗತ್ತಿಸಲಾಗುತ್ತಿತ್ತು. ಸಮ್ಮೇಳನ ಯಶಸ್ವಿಯಾಯಿತು. ಆದರೆ ಕ್ರಿಶ್ಚಿಯನ್ನರಿಗೆ ತುಂಬಲಾಗದ ನಷ್ಟವಾಯ್ತು. ಮಿಷಿನರಿಗಳೆಡೆಗೆ ಹರಿದು ಬರುತ್ತಿದ್ದ ದಾನದ ಆದಾಯ ಸಾಕಷ್ಟು ಕಡಿಮೆಯಾಯ್ತು.
ಸ್ವಾಮೀಜಿ ಅಮೆರಿಕಾ ಯುರೋಪುಗಳನ್ನು ತಿರುಗಾಡಿದರು. ಭಾರತ, ಹಿಂದೂ ಧರ್ಮಗಳ ಕುರಿತಂತೆ ಇದ್ದ ತಪ್ಪು ಅಭಿಪ್ರಾಯಗಳನ್ನು ಬಡಿದೋಡಿಸಿದರು. ತಮ್ಮ ಕೆಲಸಕ್ಕೆ ಬೇಕಾದ ಪಶ್ಚಿಮದ ಶಿಷ್ಯರನ್ನು ತಯಾರು ಮಾಡಿದರು. ಎಲ್ಲವೂ ಸರಿ. ಆಗೆಲ್ಲ ಸ್ವಾಮೀಜಿಯ ಮಾನಸಿಕತೆ ಹೇಗಿತ್ತು? ಸಿಗುತ್ತಿದ್ದ ಗೌರವಕ್ಕೆ ಮೈಮರೆತು ಭಾರತದಿಂದ ಒಂದು ಕ್ಷಣವಾದರೂ ದೂರವಿದ್ದರಾ? ಅವರದೊಂದು ಪತ್ರ ಓದಿದರೆ ಗೊತ್ತಾಗುತ್ತದೆ. ಹೆಸರು ಕೀರ್ತಿಗಳ ಆಸೆಗೆ ನಾನಿಲ್ಲಿಗೆ ಬಂದಿಲ್ಲ. ಈಗಲೂ ಲಂಗೋಟಿ ಉಡುವ, ಭಿಕ್ಷೆ ಬೇಡಿ ಉಣ್ಣುವ, ಮರದ ಕೆಳಗೆ ಮಲಗುವ ಆಸೆಯಾಗುತ್ತದೆಎಂದವರು ಬರೆದಿದ್ದರು. ಅದೇ ವೇಳೆಗೆ,ನನ್ನ ಕಾಲಿಗೆ ನಮಿಸುವ ಅಂಗ್ಲರು ನನ್ನ ದೇಶದ, ನನ್ನ ಜನಾಂಗದವರನ್ನು ಬೂಟು ಕಾಲುಗಳಲ್ಲಿ ಒದೆಯುತ್ತಾರಲ್ಲಎಂಬ ಆಕ್ರೋಶವೂ ಅವರಿಗಿತ್ತು. ಹೀಗಾಗಿ ಸ್ವಾಮೀಜಿ ತಮ್ಮ ಯಶಸ್ಸಿನ ಅಷ್ಟೂ ಪಾಲನ್ನು ಭಾರತದ ಸೇವೆಗೆ ಸುರಿದರು. ಮಲಗಿದ್ದ ಆತ್ಮಗಳನ್ನು ಬಡಿದೆಬ್ಬಿಸಿದರು. ಅದಕ್ಕಾಗಿ ಕಟಿಬದ್ಧರಾದರು.



ಚಿಕಾಗೋದಲ್ಲಿ ಸ್ವಾಮೀಜಿ


ಸ್ವಾಮೀಜಿಯ ಮಾತು, ಬರೆಹ, ಕೊನೆಗೆ ಅವರದೊಂದು ನೆನಪು ಕೂಡ ಇಂದಿಗೂ ಕೆಲಸ ಮಾಡುತ್ತಿದೆ. ತರುಣ ಪೀಳಿಗೆಗೆ, ತ್ಯಾಗಿಗಳಿಗೆ, ಸೇವಾಮಾರ್ಗಿಗಳಿಗೆ, ರಾಜನೀತಿಜ್ಞರಿಗೆ, ವ್ಯಾಪಾರಿಗಳಿಗೆ, ಅಧಿಕಾರಿಗಳಿಗೆ, ಕೊನೆಗೆ ಸನ್ಮಾರ್ಗದಲ್ಲಿ ನಡೆಯಲು ಬಯಸುವ ಪ್ರತಿಯೊಬ್ಬರಿಗೆ ಸ್ವಾಮೀಜಿ ಇಂದಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಅನುಭವಿಸಿದವರಿಗೆ ಅದು ದರ್ಶನವಾಗುತ್ತದೆ. ಉಳಿದವರಿಗೆ ಅದು ಆದರ್ಶವಾದರೂ ಆಗುತ್ತದೆ. ಅಲೀಪುರ ಮೊಕದ್ದಮೆಯಲ್ಲಿ ಸಿಲುಕಿ ಜೈಲಿನ ಏಕಾಂತದಲ್ಲಿದ್ದ ಅರವಿಂದರಿಗೆ ವಿವೇಕಾನಂದರೊಡನೆ ಮಾತನಾಡಿದ ಅನುಭವವಾಗುತ್ತಿತ್ತಂತೆ. ನಮ್ಮ ನಾಡಿನ ರಸಋಷಿ ಕುವೆಂಪು ಅವರನ್ನೇ  ವಿವೇಕಾನಂದಎನ್ನುತ್ತ ತಾದಾತ್ಮ್ಯ ಭಾವದಲ್ಲಿ ಇರುತ್ತಿದ್ದುದನ್ನು ನೋಡಿದವರಿದ್ದಾರೆ.
ಹೇಳಿ ಹಾಗಿದ್ದರೆ  ದೇಹವೇ ಇಲ್ಲದ ಮಾತುಎಂದು ಸ್ವಾಮೀಜಿ ಹೇಳಿದ್ದು ಸುಳ್ಳೆ? ಒಮ್ಮೆ ತೆರಕೊಂಡು ನೋಡಿ, ಆ ಮಹಾಪ್ರವಾಹ ನಮ್ಮಂತರಗವನ್ನು ಸೋಕಿದರೆ ನಮ್ಮ ಬದುಕೇ ಬದಲಾಗಿಬಿಡುತ್ತದೆ. ಕುವೆಂಪು ಹೇಳಿದಂತೆ ಹೊಕ್ಕರೆ ಪ್ರಬುದ್ಧರಾಗುವ, ಮಿಂದರೆ ಪುನೀತರಾಗುವ ಅಮೃತದ ಪ್ರವಾಹ ಅದು!


-ಚಕ್ರವರ್ತಿ ಸೂಲಿಬೆಲೆ