ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Sunday 16 June 2013

ವಿವೇಕಾನಂದ ಚಿಂತನ-ಮಂಥನ


ಶ್ರೀದತ್ತ  ಅವರಿಂದ ಪ್ರಾರ್ಥನೆ



ಪ್ರಬುದ್ಧ ವಿಭಾಗದ ಜಿಲ್ಲಾ ಪ್ರಮುಖರಾದ ಶ್ರೀ ಕವಿನಾಗರಾಜರಿಂದ ಪ್ರಾಸ್ತಾವಿಕ


ಪ್ರಾಂತ ಸಮಿತಿಯ ಸದಸ್ಯರಾದ ಡಾ|| ಜನಾರ್ಧನ್ ಅವರಿಂದ ಸ್ವಾಗತ ಪರಿಚಯ

ಶ್ರೀ  ವಿ.ನಾಗರಾಜ್ ಅವರಿಂದ ಉಪನ್ಯಾಸ



ಜಿಲ್ಲಾ ಸಂಯೋಜಕ ಶ್ರೀ ಹರಿಹರಪುರಶ್ರೀಧರರಿಂದ  ಆಭಾರ ಮನ್ನಣೆ
ಮತ್ತು ಮುಂದಿನ  ಕಾರ್ಯ ಯೋಜನೆ  ಕುರಿತು ನಾಲ್ಕು ಮಾತು

            ಅದೊಂದು ಅದ್ಭುತ ಕಾರ್ಯಕ್ರಮ. ಹಾಸನದ ಕನ್ನಡ ಸಾಹಿತ್ಯಪರಿಷತ್ ಭವನದೊಳಗೆ ವಿವೇಕಾನಂದ ವಿಚಾರಧಾರೆ ಹರಿಯುತ್ತಿದ್ದರೆ ಭವನದ ಹೊರಗೆ  ವರ್ಷಧಾರೆ! ಮಳೆಗೆ ಅಂಜದೆ ಅಭಿಮಾನಿಗಳು ಮಧ್ಯಾಹ್ನ 4.30 ರ ಕಾರ್ಯಕ್ರಮಕ್ಕೆ  10ನಿಮಿಷ ಮುಂಚಿತವಾಗಿಯೇ ಹಾಜರಿದ್ದರು. ಶ್ರೀ ವಿ ನಾಗರಾಜರ ಮಾತುಗಳಿಗೆ ಅಕ್ಷರ ರೂಪ ಕೊಡುವ ಬದಲು ಅವರ ಅದ್ಭುತವಾದ ಉಪನ್ಯಾಸದ ವೀಡಿಯೋ ವನ್ನು ಒಂದೆರಡು ದಿನಗಳಲ್ಲಿ ಅಳವಡಿಸುವೆ. ಅಂತೂ ಹಾಸನದಲ್ಲಿ ವಿವೇಕಾನಂದರ 150ನೇ ಜನ್ಮ ವರ್ಷದ ಕಾರ್ಯಕ್ರಮಗಳು  ಈ ಕಾರ್ಯಕ್ರಮದಿಂದ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.


ಸ್ಥಳೀಯ ಪತ್ರಿಕೆ "ಜನಮಿತ್ರ"ದಲ್ಲಿನ ವರದಿ

ವಿವೇಕಾನಂದ ವಿಚಾರಧಾರೆಯ ಚಿಂತನ -ಮಂಥನ:
ಹಾಸನ: ಸ್ವಾಮಿ ವಿವೇಕಾನಂದರ ಸಾರ್ಧಶತಮಾನೋತ್ಸವ ಸಮಿತಿಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ  ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 
            ಚಿಂತಕರಿಗಾಗಿ ವಿವೇಕಾನಂದ ವಿಚಾರಧಾರೆಯ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ಶ್ರೀ ವಿ.ನಾಗರಾಜ್ , ದೇಶದ ರಾಷ್ಟ್ರೀಯ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ರಾಷ್ಟ್ರ ಭಕ್ತ, ಪ್ರಾಚೀನ ಮತ್ತು ಆಧುನಿಕ ಚಿಂತನೆಗಳ ಸಮನ್ವಯದ ಮೂಲಕ  ರಾಷ್ಟ್ರದ ಸಮಗ್ರ ವಿಕಾಸಕ್ಕೆ  ಹೊಸ ದೃಷ್ಟಿ ನೀಡಿದ  ದಾರ್ಶನಿಕ ವಿವೇಕಾನಂದರ  ಚಿಂತನೆಗಳು ಸಾರ್ವಕಾಲಿಕವೆಂದು ನುಡಿದರು. ವಿವೇಕಾನಂದರ ವಿಚಾರಗಳನ್ನು ಇಂದಿನ ಯುವಪೀಳಿಗೆ ಅಳವಡಿಸಕೊಳ್ಳಬೇಕಾದುದು ಅತ್ಯಗತ್ಯವಾಗಿದೆ, ಎಂದರು.ಜಿಲ್ಲಾ ಸಂಯೋಜಕ ಹರಿಹರಪುರ ಶ್ರೀಧರ್, ಪ್ರಾಂತ ಸಮಿತಿಯ ಸದಸ್ಯರಾದ ಡಾ|| ಜನಾರ್ಧನ್, ಪ್ರಬುದ್ಧ ವಿಭಾಗದ ಜಿಲ್ಲಾ ಪ್ರಮುಖ್ ಶ್ರೀ ಕವಿ ನಾಗರಾಜ್ ವೇದಿಕೆಯಲ್ಲಿದ್ದರು.

No comments:

Post a Comment