ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday 25 December 2012

ಹಾಸನದಲ್ಲಿ ಸಂಕಲ್ಪ ದಿನ


ಸ್ವಾಮಿ  ವಿವೇಕಾನಂದ

ಹಾಸನದ ಶುಭೋದಯ ಕಲ್ಯಾಣಮಂಟಪದಲ್ಲಿ  ದಿನಾಂಕ 25.12.2012 ಮಂಗಳವಾರ ಸಂಜೆ 6.30 ರಿಂದ ಸ್ವಾಮಿವಿವೇಕಾನಂದರ 150ನೇ ಜನ್ಮ ವರ್ಷ ಅಭಿಯಾನದ ಪ್ರಯುಕ್ತ ಸಂಕಲ್ಪದಿನವನ್ನು ಆಚರಿಸಲಾಯ್ತು. ಶ್ರೀ ಹರಿಹರಪುರಶ್ರೀಧರ್ ಅವರು ಇಂದಿನ ದಿನದ ಮಹತ್ವವನ್ನು ತಿಳಿಸುತ್ತಾ ಇಂದಿಗೆ ಸರಿಯಾಗಿ 120 ವರ್ಷಗಳ ಹಿಂದೆ      ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯೆ ಬಂಡೆಯಮೇಲೆ ಕುಳಿತು ಧ್ಯಾನ ಮಾಡಿ  ನಮ್ಮ ದೇಶದ ಕಟ್ಟಕಡೆಯ  ಬಡವನ  ಕಣ್ಣೀರು ನಿಲ್ಲುವವರೆಗೂ ತಾವು ವಿರಮಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದನ್ನು ಪ್ರಸ್ತಾಪಿಸಿ ನಾವೂ ಕೂಡ ಇಂದು ಅದೇ ಸಂಕಲ್ಪವನ್ನು ಮಾಡಿ ವಿವೇಕಾನಂದರ ವಿಚಾರವನ್ನು ದೇಶದೆಲ್ಲೆಡೆ ಪ್ರಚಾರಮಾಡುತ್ತಾ ವಿವೇಕಾನಂದರ  150ನೇ ಜನ್ಮ ವರ್ಷ ಅಭಿಯಾನದ  ಮಾಹಿತಿ ತಿಳಿಸಿ ಸಂಕಲ್ಪ ಹೇಗೆ ಮಾಡ ಬೇಕೆಂಬುದರ ಬಗ್ಗೆ ತಿಳಿಸಿದರು. ಶ್ರೀ ಹೊ.ಸು.ರಮೇಶ್  ಅವರು ಅಭಿಯಾನ ಗೀತೆಯನ್ನು ಹೇಳಿಕೊಟ್ಟರು. ಶ್ರೀ ಅನಂತನಾರಾಯಣ ಅವರು ಸಂಕಲ್ಪದ ನಂತರ ಶಾಂತಿಮಂತ್ರವನ್ನು ಆರಂಭಿಸಿದರೆ ಎಲ್ಲರೂ ಸಾಮೂಹಿಕವಾಗಿ ಶಾಂತಿಮಂತ್ರವನ್ನು ಹೇಳುವುದರ ಜೊತೆಗೆ ಕಾರ್ಯಕ್ರಮವು ಮುಕ್ತಾಯವಾಯ್ತು.


No comments:

Post a Comment